• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

February 10, 2020
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

September 26, 2023
ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ

ಮತ ಸೆಳೆಯಲು ಮಹಿಳಾ ಮೀಸಲಾತಿ ಮಸೂದೆ ತರುತ್ತಿದ್ದಾರೆ ಹೊರತು ಮಹಿಳೆಯರ ಮೇಲೆ ಕಾಳಜಿಯಿಂದಲ್ಲ: ಸಿದ್ದರಾಮಯ್ಯ

September 26, 2023
ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ಬೆಂಗಳೂರು ಬಂದ್​ಗೆ ಪೊಲೀಸರು ಫುಲ್​ ಅಲರ್ಟ್.. ಟೌನ್ ಹಾಲ್ ಬಳಿ 250ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್..!

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸ್ತಬ್ಧವಾಗಲಿದೆ ರಾಜಧಾನಿ..!

September 25, 2023
ಕನ್ನಡದ ಬಿಗ್ ಬಾಸ್ 10 – ಅಕ್ಟೊಬರ್ 8ರಿಂದ ಶುರು

ಫಸ್ಟ್ ಟೈಮ್ ಬಿಗ್ ಬಾಸ್ 10 ಮನೆಗೆ ಹೋಗುವ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಕಲರ್ಸ್ ವಾಹಿನಿ

September 24, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ವಿಕ್ರಮ್ ಲ್ಯಾಂಡರ್ ಪುನಶ್ಚೇತನಕ್ಕೆ 14 ದಿನ ಕಾಯಲಿದೆ ಇಸ್ರೊ

September 24, 2023
ಕೆರೆಗಳನ್ನು ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣ ಕಾರ್ಯಗಳಿಗೆ ಒತ್ತು ನೀಡಿ: ಸಣ್ಣ ನೀರಾವರಿ ಸಚಿವ ಎನ್. ಎಸ್ ಬೋಸರಾಜು ಸೂಚನೆ – ವಿಕಾಸಸೌಧದಲ್ಲಿಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಸೆ.​​​ 26ರಂದು ಬೆಂಗಳೂರು ಬಂದ್​​ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ..!

September 23, 2023
ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

September 23, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಕಾಫಿ with ಸಾಹಸಿ ಕನ್ನಡಿಗ

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

by Harini Bengaluru
February 10, 2020
in ಕಾಫಿ with ಸಾಹಸಿ ಕನ್ನಡಿಗ
304 3
3
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್
612
SHARES
1.7k
VIEWS
Share on FBShare on TwitterShare on whatsapp
0
0

ಒಂದು ಹಗ್ಗ ಸಿಕ್ರೆ ಏನು ಮಾಡಲು ಸಾಧ್ಯ ಅನ್ನುವ ಪ್ರಶ್ನೆ ಕೇಳಿದೆ ಸಿಗೋ ಉತ್ತರ ಸಾವಿರ. ಆದರೆ ಮೈಸೂರಿನ ಮಹಿಳೆಯೊಬ್ಬರಿಗೆ ದಾರ ಸಿಕ್ರೆ, ಈ ಹಗ್ಗದ ಮೂಲಕ ಬೆಟ್ಟ ಹತ್ತಲು ಸಾಧ್ಯವೇ ಎಂದು ಯೋಚಿಸುತ್ತಾರೆ.

ಹೌದು ಹೀಗೆ ಯೋಚನೆ ಮಾಡಬಲ್ಲವರು ರುಕ್ಮಿಣಿ ಚಂದ್ರನ್. ಅರೇ ಹಗ್ಗ ಹಿಡಿದು ಬೆಟ್ಟ ಹತ್ತುವುದೇ, ಜಿರಳೆ ನೋಡಿದರೆ ಭಯ ಪಡುತ್ತಾರೆ ಮಹಿಳೆಯರು, ಅಂದ ಮೇಲೆ ಬೆಟ್ಟ ಹತ್ತುವುದೇ.

ಈಗ ಕಾಲ ಬದಲಾಗಿದೆ. ಪುರುಷನಿಗೆ ಸರಿ ಸಮಾನವಾಗಿ ನಿಲ್ಲುವ ತಾಕತ್ತು ಪಡೆದಿದ್ದಾಳೆ ಮಹಿಳೆ. ಅವಕಾಶ ಕೊಟ್ಟರೆ ಸ್ತ್ರೀ ಏನನ್ನಾದರೂ ಬೇಕಾದರೂ ಸಾಧಿಸಿ ತೋರಿಸಿಬಲ್ಲಳು ಎಂದು ತೋರಿಸಿಕೊಟ್ಟ ಅನೇಕ ಸಾಧಕಿಯರು ನಮ್ಮ ಮುಂದಿದ್ದಾರೆ.

ಆ ಪೈಕಿ ಕಾಣಿಸಿಕೊಳ್ಳುವ ಸಾಧಕಿ ಮೈಸೂರಿನ ರುಕ್ಮಿಣಿ ಚಂದ್ರನ್.

ಹಲವು ವರ್ಷಗಳ ಹಿಂದಿನ ಮಾತು. ರುಕ್ಮಿಣಿ ಮೂರನೇ ತರಗತಿಯಲ್ಲಿದ್ದರು. ಆಗಷ್ಟೇ ಬುಲ್ ಬುಲ್  ಪ್ರಾರಂಭವಾಗಿತ್ತು. ಹೀಗಾಗಿ ಸಾಹಸ ಅನ್ನುವುದನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಬಂದಿದ್ದ ರುಕ್ಮಿಣಿ ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್, ಆರ್ಮಿ ವಿಂಗ್ ನಂತ್ರ ಎನ್.ಸಿ.ಸಿಯಲ್ಲಿ ತೊಡಗಿಸಿಕೊಂಡರು.

ಅಲ್ಲಿಂದ ರೈಫಲ್ ಶೂಟಿಂಗ್,ಟ್ರಕ್ಕಿಂಗ್ ತರಬೇತಿಗಳು ಪ್ರಾರಂಭವಾಯ್ತು. ಈ ವೇಳೆ ರೈಫಲ್ ಶೂಟಿಂಗ್ ನಲ್ಲಿ ಪ್ರಥಮ ಬಹುಮಾನ ಬಂತು.

ಜೀವನದಲ್ಲಿ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನುವ ಹಂಬಲವಿರಲಿಲ್ಲ. ಆದರೆ ಅರಸಿಕೊಂಡು ಬಂದ ಅವಕಾಶಗಳು ಇವರನ್ನು ಸಾಧನೆಯ ಹಾದಿಯಲ್ಲಿ ಕರೆದೊಯ್ಯಿತು.

ಮೈಸೂರಿನ ಮರಿಮಲ್ಲಪ್ಪದಲ್ಲಿ ಪಿಯುಸಿ ಮುಗಿಸಿ ಮಹಾರಾಣಿ ಕಾಲೇಜಿನಲ್ಲಿ ಪದವಿ ಸೇರುವ ಹೊತ್ತಿಗೆ ಏರ್ ವಿಂಗ್ಸ್ ಗ್ಲಿಂಗ್, ಪ್ಯಾರಾ ಸೈಲಿಂಗ್, ಏರೋ ಸ್ಪೋರ್ಟ್ಸ್ ಗಳಲ್ಲಿ ಅವಕಾಶ ಸಿಕ್ತು. ಅದರಲ್ಲೂ ತೊಡಗಿಸಿಕೊಂಡರು.

ಪದವಿ ಮುಗಿದ ಮೇಲೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮನಸ್ಸು ಮಾಡಿದ್ದರೆ ಯಾವುದೇ ಕಂಪನಿಯಲ್ಲಿ ಕೆಲಸ ಸೇರಬಹುದಾಗಿತ್ತು. ಯಾವುದೇ ರಗಳೆ ಬೇಡ ಸಂಸಾರದ ಸಾರ ಸವಿಯೋಣ ಎಂದು ಗೃಹಿಣಿಯಾಗಿರಬಹುದಿತ್ತು.

ಆದರೆ ಪತಿಗೆ ಗ್ಲೈಡಿಂಗ್, ಪ್ಯಾರಾಸೈಲಿಂಗ್ ಬಗ್ಗೆ ಪ್ರೀತಿಯಿತ್ತು. ಮಾತ್ರವಲ್ಲ ಅದನ್ನು ಅವರು ಕಲಿಸುತ್ತಿದ್ದರು. ಹೀಗಾಗಿ ರುಕ್ಮಿಣಿ  ಕೂಡಾ ಜನರಲ್ ತಿಮ್ಮಯ್ಯ ನ್ಯಾಶನಲ್ ಅಕಾಡೆಮಿ ಆಫ್ ಅಡ್ವೆಂಚರ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲ ವರ್ಷಗಳ ನಂತ್ರ ನಾನೇ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ರೆ ಹೇಗೆ ಅನ್ನುವ ಯೋಚನೆ ಬಂತು. ಬಂತು, ಮತ್ತೆ ಮಾಡಲಿಲ್ಲ, 1990ರಲ್ಲಿ ಅಲ್ಮನಾಕ್ ಅಡ್ವೆಂಚರ್ ಕ್ಲಬ್ ಅನ್ನು ಪ್ರಾರಂಭಿಸಿಯೇ ಬಿಟ್ಟರು.

ಅಡ್ವೆಂಚರ್ ನಲ್ಲಿ ಆಸಕ್ತಿ ಹೊಂದಿದವರಿಗೆ ತರಬೇತಿ ಕೊಡುವುದರ ಜೊತೆ ಸಾಹಸ ಕ್ರೀಡೆಗಳಿಗೆ ಬೇಕಾದ ವಸ್ತುಗಳನ್ನ ತಯಾರಿಸುವ ಉದ್ಯಮಕ್ಕೂ ಕೈ ಹಾಕಿದರು.

ಟ್ರಕ್ಕಿಂಗ್ ಬ್ಯಾಗ್, ಸ್ಲೀಪಿಂಗ್ ಬ್ಯಾಗ್, ಲೈಫ್ ಜಾಕೆಟ್, ಶಿಲಾರೋಹಣ ಹಗ್ಗ, ಸೀಟ್ ಹಾರ್ನೆಸ್ ಗಳನ್ನು ತಯಾರಿಸಲಾರಂಭಿಸಲಿದ್ದರು. ಇದೀಗ ಸ್ಕೂಲ್ ಬ್ಯಾಗ್ ತಯಾರಿಕೆ ಉದ್ಯಮವನ್ನು ಕೂಡಾ ನಡೆಸುತ್ತಿದ್ದಾರೆ ರುಕ್ಮಿಣಿ.

ಹಾಗಾದ್ರೆ ರುಕ್ಮಿಣಿಯವರದ್ದು ಹೂವಿನ ಹಾದಿ, ಕೈಯಲ್ಲಿ ಒಳ್ಳೆ ಕಾಸು ಓಡಾಡಿಕೊಂಡಿದೆ ಎಂದು ನೀವು ಅಂದುಕೊಂಡ್ರೆ ತಪ್ಪಾಗುತ್ತದೆ.

ಈ ಸಾಧನೆಯ ಹಾದಿಯಲ್ಲಿ ಅವರು ಎದುರಿಸಿದ ಕಷ್ಟದ ಸರಮಾಲೆಗಳು, ಅದನ್ನು ಎದುರಿಸಿದ ಪರಿ ನಾಡಿನ ಮಹಿಳೆಯರಿಗೆ ಸ್ಫೂರ್ತಿಯೇ ಸರಿ.

ಚಂದ್ರನ್ ಅವರೊಂದಿಗೆ ಮದುವೆಯಾದ ಬಳಿಕ ಮೂರು ಹೆಣ್ಣು ಮಕ್ಕಳ ತಾಯಿಯಾದರು ರುಕಿಣ್ಮಿ, ಆದರೆ ಸಂತಸ ತುಂಬಿ ತುಳುಕುತ್ತಿದ್ದ ಕುಟುಂಬದ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ. 2003ರಲ್ಲಿ ಪತಿ ಚಂದ್ರನ್ ಮೈಸೂರು ವಿಮಾನ ನಿಲ್ದಾಣದಲ್ಲಿ ಏರ್ ವಿಂಗ್ ನವರಿಗೆ ತರಬೇತಿ ಕೊಡುವ ಸಂದರ್ಭದಲ್ಲಿ ಗಾಯಗೊಂಡರು. ಪುಟ್ಟ ವಿಮಾನ ಅಪಘಾತಕ್ಕೀಡಾದ ಕಾರಣ ಚಂದ್ರನ್ ಮೆದುಳಿಗೆ ಪೆಟ್ಟು ಬಿತ್ತು.

ಒಂದೆಡೆ ಪತಿಯ ಶುಶ್ರೂಷೆಗೆ ಹಣ ಬೇಕು, ಮತ್ತೊಂದು ಮಕ್ಕಳನ್ನು ಓದಿಸಲಾಗದ ಸಂಕಷ್ಟ ಈ ವೇಳೆ ರುಕ್ಮಿಣಿ ಸಹಾಯಕ್ಕೆ ಬಂದಿದ್ದು ಶ್ರೀಕ್ಷೇತ್ರ ಧರ್ಮಸ್ಥಳದ ರುಡ್ ಸೆಟ್.

ಟೈಲರಿಂಗ್ ಕೆಲಸ ಗೊತ್ತಿದ್ದ ಕಾರಣ ಅದರಲ್ಲೇ ಮುಂದುವರಿಯಲು ನಿರ್ಧರಿಸಿದರು. ಸಾಹಸ ಕ್ರೀಡೆಗಳಿಗೆ ಬೇಕಾದ ವಿವಿಧ ಸಾಧನ ಸಲಕರಣೆಗಳನ್ನು ನಾನ್ಯಾಕೆ ತಯಾರಿಸಬಾರದು ಎಂದು ಒಂದೊಂದೇ ಉತ್ಪನ್ನಗಳನ್ನ ತಯಾರಿಯಲ್ಲಿ ತೊಡಗಿದರು,.

ನಿಧಾನವಾಗಿ ಬೇಡಿಕೆ ಬರಲಾರಂಭಿಸಿತು. ಸಾಹಸ ಕ್ರೀಡಾ ಶಿಬಿರಗಳಿಗೆ ಬರುವವರೇ ಗ್ರಾಹಕರಾದರು.

ಬದುಕಿನಲ್ಲಿ ಸಂಕಷ್ಟಗಳ ಸರಮಾಲೆ ಎದುರಿಸಿದ ರುಕ್ಮಿಣಿ ಬದುಕಿಗೆ ಆವರಿಸಿದ್ದ ಕತ್ತಲೆ ಈಗ ಸರಿದಿದೆ. ನವದೆಹಲಿಯ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ನಿರ್ದೇಶಕಿಯಾಗಿರುವ ಜೊತೆಗೆ ಅಲ್ಮೆನಾಕ್ ಅಜ್ವೆಂಚರ್ ಕ್ಲಬ್ ಇದೀಗ NAF ನ ಕರ್ನಾಟಕ ಚಾಪ್ಟರ್ ನಲ್ಲಿ ಗುರುತಿಸಿಕೊಂಡಿದ್ದಾರೆ.

ಸದಾ ಕಾಲ ಒಂದಲ್ಲ ಒಂದು ಶಿಬಿರ ನಡೆಯುತ್ತಲೇ ಇದೆ. ಹೀಗಾಗಿ ಅವರ ಮುಖದಲ್ಲಿ ನಗುವಿದೆ. ಇದರೊಂದಿಗೆ ಐಟಿ ಬಿಟಿ ಕಂಪನಿಗಳು ಕೂಡಾ ಸಾಹಸ ಕ್ರೀಡೆಯ ತರಬೇತಿ ಸಲುವಾಗಿ ರುಕ್ಮಿಣಿ ಯವರನ್ನೇ ಕರೆಯತ್ತಿದೆ.  ಖಾಸಗಿ ಕಂಪನಿಯ ಸಿಬ್ಬಂದಿಗಳ ಕೌಶಲ, ಕಾರ್ಯ ಕ್ಷಮತೆ ಹೆಚ್ಚಿಸೋ ಸಲುವಾಗಿ ಚಾರಣ ಸೇರಿ ಅನೇಕ ಸಾಹಸಮಯ ಕ್ರೀಡೆ ಸಂಘಟಿಸಲು ರುಕ್ಮಿಣಿಯವರನ್ನೇ ಸಂಪರ್ಕಿಸುತ್ತಿದೆ. ಹೀಗಾಗಿ ಕೈ ತುಂಬಾ ಕೆಲಸದಲ್ಲಿ ಬ್ಯುಸಿ ಮೈಸೂರಿನ ರುಕ್ಮಿಣಿ ಚಂದ್ರನ್ ರವರು.

 

 

 

Tags: NAF ಶ್ರೀಕ್ಷೇತ್ರ ಧರ್ಮಸ್ಥಳದ ರುಡ್ ಸೆಟ್ ಅಲ್ಮನಾಕ್ ಅಡ್ವೆಂಚರ್ ಕ್ಲಬ್ ಜನರಲ್ ತಿಮ್ಮಯ್ಯ ನ್ಯಾಶನಲ್ ಅಕಾಡೆಮಿ ಆಫ್ ಅಡ್ವೆಂಚರ್
Share254Tweet149Send
ADVERTISEMENT
Harini Bengaluru

Harini Bengaluru

Related Posts

ನಗುನಗು ನೀ ನಗು……

ನಗುನಗು ನೀ ನಗು……

by ಮಹದೇವ ಪ್ರಸಾದ್ - (M D P)
February 9, 2021
0

ಕಷ್ಟ ,ಬಡತನಗಳೇನೇ ಇದ್ದರೂ ಲವಲವಿಕೆಯಿಂದ ತಮಾಷೆಯಾಗಿ ತನ್ನ ಜೊತೆಯವರಿಗೂ ನೋವಾಗದ ಹಾಗೆ ತಮಾಷೆ ಮಾಡಿಕೊಂಡು ಮಹತ್ವಾಕಾಂಕ್ಷೆಯಿಂದ ಹೇಗೆ ಎತ್ತರಕ್ಕೆ ಬೆಳೆಯಬಹುದು ಎಂದು ನಾಗಶೇಖರ್ ನೋಡಿ ಕಲಿಯಬೇಕು,ನನ್ನ ಹೈಸ್ಕೂಲ್...

ಬಂದದ್ದೆಲ್ಲಾ ಬರಲಿ…!

ಬಂದದ್ದೆಲ್ಲಾ ಬರಲಿ…!

by ಮಹದೇವ ಪ್ರಸಾದ್ - (M D P)
February 6, 2021
0

2020 ಮಾರ್ಚ್ 21 ರ ವರೆಗೆ ಎಲ್ಲವೂ ಸರಿಯಾಗಿಯೇ ನಡೆದು ಕೊಂಡು ಹೋಗುತ್ತಿತ್ತು,ಇದ್ದಕ್ಕಿದ್ದ ಹಾಗೆ, ಯಾವುದೇ ಸುಳಿವನ್ನು ನೀಡದೆ,ಲಾಕ್ ಡೌನ್ ಎಂಬ ಸಿಡಿಲು ಬಡಿಯಿತು!!,, ಪ್ರತಿದಿನವೂ ಲಕ್ಷಾಂತರ...

ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ,……!

ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ,……!

by ಮಹದೇವ ಪ್ರಸಾದ್ - (M D P)
February 4, 2021
0

ಪ್ರಮುಖ ಘಟನೆಗಳು ,ತಿರುವುಗಳು,ಸೋಲು ಗೆಲುವುಗಳು,ಹಾದಿಯಲ್ಲಿ ಸಿಕ್ಕಂತ ಪ್ರಮುಖ ವ್ಯಕ್ತಿಗಳು ಮಾತ್ರ ಆಗಾಗ ನೆನಪಿಸಿಕೊಳ್ಳುತ್ತೇವೆ ಮತ್ತು ಬೇರೆಯವರು ಕೂಡ ಗುರುತಿಸುತ್ತಾರೆ.ಆದರೆ ಪ್ರತಿ ಘಟನೆಯ ನಡುವಿನ ಅಂತರ ಕೆಲವೊಮ್ಮೆ ಒಂದು...

ನವನಾರೀ ಶಕ್ತಿ ವಿಶೇಷ: IPS ಅಧಿಕಾರಿ ರೂಪಾ ಮುದ್ಗಿಲ್ ರವರ ಸಂದರ್ಶನ

ನವನಾರೀ ಶಕ್ತಿ ವಿಶೇಷ: IPS ಅಧಿಕಾರಿ ರೂಪಾ ಮುದ್ಗಿಲ್ ರವರ ಸಂದರ್ಶನ

by ಹರಿಣಿ ಸಿದ್ದಾಪುರಪಾಳ್ಯ ವೆಂಕಟೇಗೌಡ
October 24, 2020
1

ಸಧೃಡ ಸಮಾಜ ನಿರ್ಮಾಣವಾಗಬೇಕಾದಲ್ಲಿ ಸಮಾಜದ ಅರ್ಧದಷ್ಟು ಪ್ರಮಾಣದಲ್ಲಿರುವ ಮಹಿಳೆಯರೂ ಸಧೃಡರಾಗಬೇಕು. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಯೋಜನೆಗಳು ರೂಪುಗೊಳ್ಳುತ್ತಿದ್ದರೂ ಸಹ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮನ್ನು ತಾವು...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet