• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-13

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-13

July 19, 2020
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ಎರಡು ವಾರಗಳ ವಿರಾಮದ ಬಳಿಕ ಚಂದ್ರಯಾನ ಪುನಶ್ಚೇತನ: ಇಸ್ರೊ ಪ್ರಯತ್ನ

September 21, 2023
ಕಾವೇರಿ ವಿವಾದ: ತಮಿಳು ನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಕಾವೇರಿ ಹೋರಾಟಕ್ಕೆ ಧುಮುಕಿದ ಮೊದಲ ಕನ್ನಡ ನಟ ದರ್ಶನ್‌ ತೂಗುದೀಪ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ಸೆ.20ರಂದು ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ; ಉಳಿದ ಕಡೆ ಹಗುರ, ಸಾಧಾರಣ

September 20, 2023
ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

September 20, 2023
ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

September 20, 2023
ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಜನ ಸಂಪರ್ಕಕ್ಕೆ ವಾಟ್ಸಪ್‌ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ! ನೀವೂ ಸೇರಬಹುದು- ಇಲ್ಲಿದೆ ಲಿಂಕ್‌

September 20, 2023
ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

September 19, 2023
ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

September 19, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

September 19, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಅಲೆಮಾರಿ

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-13

by ಧರ್ಮೇದ್ರ ಕುಮಾರ್ ಅರೇನಹಳ್ಳಿ
July 19, 2020
in ಅಲೆಮಾರಿ
323 3
0
ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-13
634
SHARES
1.8k
VIEWS
Share on FBShare on TwitterShare on whatsapp
0
0

ಇತ್ತ… ದುರ್ಗದಲ್ಲಿ ನಿಧಾನವಾಗಿ ಆತಂಕದ ಕಾರ್ಮೋಡ ಹೆಪ್ಪುಗಟ್ಟ ತೊಡಗಿತು… ಹೋಗಿ ಒಂದು ವಾರವಾದರೂ ತಿಮ್ಮಣ್ಣ ನಾಯಕರಿಂದ ಯಾವುದೇ ಸುದ್ದಿ ಬಂದಿರಲಿಲ್ಲ… ಪ್ರಧಾನಿಗಳಿಗೇಕೋ ಸುಟ್ಟ ವಾಸನೆ ಬಂತು… ತಡ ಮಾಡಲಿಲ್ಲ… ಸೀದಾ ಹೋಗಿದ್ದೇ ಸಂಪಿಗೆ ಸಿದ್ದೇಶ್ವರನ ಮುಂದೆ ಕೈಜೋಡಿಸಿ ನಿಂತು ಪ್ರಶ್ನೆ ಕೇಳಿದ್ರು….

ಅವರೆಣಿಕೆ ತಪ್ಪಾಗಲಿಲ್ಲ… ಜಗನ್ನಿಯಾಮಕನ ಮುಂದೆ ನಿಂತ ಕೆಲವೇ ಕ್ಷಣಗಳಲ್ಲಿ ಎಡಭಾಗದ ಹೂವು ಟಪ್ಪನೆ ಕೆಳಕ್ಕೆ ಬಿತ್ತು… ಎಲ್ಲೋ ಏನೋ ಎಡವಟ್ಟಾಗಿದೆ… ನಾಯಕರು ಅಪಾಯದಲ್ಲಿದ್ದಾರೆ… ಒಡನೆಯೇ ತುರ್ತು ಸಭೆ ಕರೆದ ಪ್ರಧಾನಿಗಳು ಸುದೀರ್ಘವಾಗಿ ಚರ್ಚಿಸಿ ಬೇಹುಗಾರರನ್ನು ಹಂಪಿಗೆ ಅಟ್ಟಿದರು… ಸುದ್ದಿ ನಿಜವಾಗಿತ್ತು… ತಿಮ್ಮಣ್ಣ ನಾಯಕರೂ ಜಡವಿಯೂ ಹಂಪಿಯಲ್ಲಿಯೇ ಹೆಣವಾಗಿ ಹೋಗಿದ್ದರು…

ಧೃತಿಗೆಡಲಿಲ್ಲ ಪ್ರಧಾನಿಗಳು… ಅತೀ ಹತ್ತಿರದಲ್ಲೇ ಇದ್ದ ಒಂದು ಶುಭ ಮುಹೂರ್ತ ನೋಡಿ ತಿಮ್ಮಣ್ಣ ನಾಯಕರ ಮಗ ಓಬಣ್ಣ ನಾಯಕನಿಗೆ ಪಟ್ಟ ಕಟ್ಟಿದರು… ಒಲ್ಲದ ಮನದಿಂದ ಅಧಿಕಾರ ವಹಿಸಿಕೊಂಡ ಓಬಣ್ಣ ಅಪ್ಪನ ಮುಖ ನೋಡುವವರೆಗೂ ಸಿಂಹಾಸನ ಏರುವುದಿಲ್ಲವೆಂದು ಖಂಡ ತುಂಡವಾಗಿ ನುಡಿದ… ಅವನನ್ನು ಅವನ ದುಃಖದ ಸಮೇತ ಅಲ್ಲೇ ಬಿಟ್ಟ ಪ್ರಧಾನಿಗಳು ಒಂದಿಬ್ಬರು ಸರದಾರರೊಡನೆ ಖುದ್ದು ಹಂಪಿಗೆ ಹೊರಟರು… ಸೂಕ್ತ ಉಪಚಾರಗಳೆಲ್ಲ ಮುಗಿದ ಮೇಲೆ…

ನಮ್ಮ ತಿಮ್ಮಣ್ಣ ನಾಯಕರು ಇಲ್ಲಿಗೆ ಬಂದು ಹತ್ತು ದಿನಗಳಾದವು… ಅವರ ಸುದ್ದಿಯೇ ಇಲ್ಲ… ಅದನ್ನೇ ವಿಚಾರಿಸೋಣವೆಂದು ಬಂದೆವು…

ಯಾರು… ಯಾರೂ ಅಂದ್ರಿ… ಮತ್ತಿ ತಿಮ್ಮಣ್ಣ ನಾಯಕರೇ… ನಮ್ಮಲ್ಲಿಗೆ ಅವರು ಬಂದೇ ಇಲ್ಲವಲ್ಲ… ಕುತಂತ್ರಿ ಸಾಳುವ ನರಸಿಂಗರಾಯನ ಬಾಯಿಂದ ಸುಳ್ಳು ಸುಲಲಿತವಾಗಿ ಹರಿಯುತ್ತಿತ್ತು…

ಹೇ… ಎನ್ ಹೀಗಂತೀರೀ… ಹಂಪಿಗೆ ಹೋಗಿ ಸನ್ಮಾನ ಸ್ವೀಕರಿಸಿ ಬರ್ತೀನಿ ಅಂತ ದುರ್ಗ ಬಿಟ್ಟು ಹೋದೋರು ಹತ್ತು ದಿನ ಆಯ್ತಲ್ಲ… ಪ್ರಧಾನಿಗಳ ದನಿಯಲ್ಲಿ ಅಸಹನೆ…

ಹೌದು… ನಾವೂ ಸಹ ಅವರನ್ನೇ ಇದಿರು ನೋಡುತ್ತಿದ್ದೆವು… ಆದರೇ ಇಲ್ಲಿಗೆ ಬರಲೇ ಇಲ್ವಲ್ಲ… ನರಸಿಂಗರಾಯ ಸುಳ್ಳಿಗೆ ಹುಟ್ಟಿದಂತಿದ್ದ…

ಇವರ ಬಳಿ ಇನ್ನೂ ಮಾತಾಡಿ ಉಪಯೋಗವಿಲ್ಲವೆಂದು ಸ್ಪಷ್ಟವಾಗಿ ಅರಿವಾಗಿ ಹೋಯಿತು ಪ್ರಧಾನಿಗಳಿಗೆ… ಹ್ಹ… ಶೌರ್ಯಕ್ಕೂ ವೀರ್ಯಕ್ಕೂ ಹೆಸರಾದ ವಿಜಯನಗರವೀಗ ದ್ರೋಹಕ್ಕೂ ನಾಚಿಕೆಗೇಡಿತನಕ್ಕೂ ಹೆಸರಾಗಿ ನಿಂತಿದೆಯಲ್ಲ ಎನಿಸಿತು… ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಿರ್ಧರಿಸಿದವರೇ… ಎದ್ದು ಸೀದಾ ಹೊರಬಂದು ಹಂಪಿಯ ಹೆಬ್ಬಾಗಿಲನ್ನು ಕಾಯುತ್ತಿದ್ದ ಸೈನಿಕರ ಗುಂಪಿಗೆ ಬಂಗಾರದ ನಾಣ್ಯಗಳ ಗಂಟೊಂದನ್ನು ಕೊಟ್ಟು ಹೇಳಿದರು…

ಸಂಜೆಯೊಳಗೆ ನನಗೆ ನಮ್ಮ ತಿಮ್ಮಣ್ಣ ನಾಯಕರು ಬೇಕು ಅಷ್ಟೇ…

ಗಂಟನ್ನು ಸವರುತ್ತಾ ಗುಂಪು ತಲೆಯಾಡಿಸಿತು… ಆಗಲಿ…

ಮಧ್ಯರಾತ್ರಿ ಹನ್ನೆರಡರ ಹೊತ್ತಿಗೆ ಪ್ರಧಾನಿಗಳು ಇಳಕೊಂಡಿದ್ದ ಡೇರೆಯೊಳಕ್ಕೆ ಮೆಲ್ಲನೆ ಬಂದ ಗುಂಪು ತಾವು ಹೊತ್ತುಕೊಂಡು ಬಂದಿದ್ದ ಪೆಟ್ಟಿಗೆಯೊಂದನ್ನು ಇಳಿಸಿ ಹೊರಟು ಹೋಯಿತು…

ಲಗುಬಗೆಯಿಂದ ಪೆಟ್ಟಿಗೆಯನ್ನು ತೆರೆದು ನೋಡಿದ ಪ್ರಧಾನಿಗಳ ಮುಖದ ಪಸೆ ಆರಿಹೋಯಿತು…

ಅಲ್ಲಿ ನಿಶ್ಚಲವಾಗಿ ಮಲಗಿತ್ತು ತಿಮ್ಮಣ್ಣ ನಾಯಕರ ದೇಹ… ಅದಾಗಲೇ ಒಣಗಲಾರಂಭಿಸಿದ್ದ ಕಳೆಬರವನ್ನು ಹೆಚ್ಚಿಗೆ ಇಡಲಾರದೆಂಬುದನ್ನು ಅರಿತ ಪ್ರಧಾನಿಗಳು ನುರಿತ ವೇಗಿಗಳನ್ನು ದುರ್ಗಕ್ಕೆ ಕಳಿಸಿ… ಓಬಣ್ಣ ನಾಯಕನನ್ನು ತುಂಗಭದ್ರಾ ತೀರಕ್ಕೆ ಕರೆದುಕೊಂಡು ಬರುವಂತೆ ಅಜ್ಞಾಪಿಸಿ… ತಾವು ನಾಯಕರ ಶವದೊಂದಿಗೆ ನದೀ ತೀರವನ್ನು ಸೇರಿದರು…

ಮರುದಿನ ಸೂರ್ಯಾಸ್ತದ ಹೊತ್ತಿಗೆ… ಚಿತ್ರಕಲ್ಲುದುರ್ಗದ ಪಾಳೆಗಾರರ ವಂಶದ ಸ್ಥಾಪಕ ಮತ್ತಿ ತಿಮ್ಮಣ್ಣ ನಾಯಕರ ದೇಹ ಅಗ್ನಿಯಲ್ಲಿ ಲೀನವಾಗಿ ಹೋಯಿತು… ಭಾರವಾದ ಹೆಜ್ಜೆಗಳೊಂದಿಗೆ ಎಲ್ಲರೂ ದುರ್ಗಕ್ಕೆ ಹಿಂದಿರುಗಿದರು… ಆದರೆ ಅವನೊಬ್ಬ ಅಲ್ಲೇ ಧಗಧಗನೆ ಉರಿಯುತ್ತಿದ್ದ ಚಿತೆಯನ್ನೇ ದೃಷ್ಟಿಸುತ್ತಾ ನಿಂತಿದ್ದ…

ಅಘೋರಾ…

ಎಲ್ಲ ಬೂದಿಯಾಗಿ ಹೋದ ನಂತರ ಮೆಲ್ಲನೆ ಚಿತೆಯೊಳಕ್ಕೆ ಕೈಯಿಟ್ಟು… ನಾಯಕರ ಬೆನ್ನ ಮೂಳೆಯೊಂದನ್ನು ಹೊರತೆಗೆದು… ತನ್ನ ಜೋಳಿಗೆಯಲ್ಲಿಟ್ಟುಕೊಂಡು… ಸರಸರನೆ ಹಂಪಿಯ ಹೆಬ್ಬಾಗಿಲಿನತ್ತ ಬಂದು … ಸಮಯ ಕಾದು ಸೈನಿಕರು ಜೋಂಪು ಬೀಳುವ ಹೊತ್ತಿಗೆ ಆ ಬೆನ್ನ ಮೂಳೆಯನ್ನು ಹೆಬ್ಬಾಗಿಲಿನ ನೆಲಕ್ಕೆ ಬಡಿದು ಹುಗಿದುಬಿಟ್ಟು ಹಿಂದಕ್ಕೆ ತಿರುಗಿ ನೋಡದೇ ದುರ್ಗದ ಕಡೆಗೆ ನಡೆದುಬಿಟ್ಟ…

ಇತ್ತ ಅಂತಃಪುರದಲ್ಲಿ ಮೈಚೆಲ್ಲಿ ಮಲಗಿದ್ದ ನರಸಿಂಗರಾಯನಿಗೆ ಯಾರೋ ತನ್ನ ಕಪಾಲ ಚೆದುರಿ ಹೋಗುವಂತೆ ಚಟೀರನೇ ಬಾರಿಸಿದಂತೆ ಕೆಟ್ಟ ಕನಸು ಬಿದ್ದು ಧಡಕ್ಕನೆ ಎದ್ದು ಕುಳಿತ… ಗಂಟಲೆಲ್ಲ ಒಣಗಿ ಹೋಗಿ ನಾಲಿಗೆ ತಳಕ್ಕೆ ಕಚ್ಚಿಕೊಂಡಿತ್ತು… ಆ ಅಂಧಕಾರದಲ್ಲಿ ನೀರು ಕುಡಿಯಲು ಎದ್ದ ಅವನಿಗೆ ಯಾರೋ ಹೆಂಗಸು ಅರಚಿಕೊಂಡ ಸದ್ದು… ಹೆದರಿ ತೊಳ್ಳೆ ನಡುಗಿಹೋದ ರಾಯ ಅಲ್ಲೇ ಕುಸಿದು ಕುಳಿತ…

ವೈಭವದ ವಿಜಯನಗರ ಹಾಳು ಹಂಪಿಯಾಗಲು ದಿನಗಳಷ್ಟೇ ಬಾಕಿಯಿತ್ತು…

ದುರ್ಗದ ಏಕನಾಥಿಯ ಕಣ್ಣುಗಳು ಕೆಂಡದುಂಡೆಗಳಂತೆ ಧಗಧಗಿಸುತ್ತಿದ್ದವು…

ಅದಾಗಿ ಒಂದು ತಿಂಗಳು ಕಳೆದಿರಬಹುದೇನೋ… ದುರ್ಗದ ಸಂಪಿಗೆ ಸಿದ್ದೇಶ್ವರನ ಗುಡಿಯ ಪ್ರಾಂಗಣದಲ್ಲಿ ಏಳು ಜನ ರಸಾಸಿದ್ಧರು ಧಿಡೀರನೆ ಕಾಣಿಸಿಕೊಂಡರು… ವಿಷಯ ತಿಳಿದ ಒಬ್ಬಣ್ಣ ನಾಯಕ ಲಗುಬಗೆಯಿಂದ ಓಡೋಡಿ ಬಂದು ಅವರ ಕಾಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿದ…

ಏಳೋ ಓಬಣ್ಣ… ದುರ್ಗದ ಉಜ್ವಲ ಭವಿಷ್ಯಕ್ಕಾಗಿ… ನಿನ್ನ ಉತ್ತರೋತ್ತರ ಅಭಿವೃದ್ಧಿಗಾಗಿ ಇನ್ನು ಮೇಲಿನಿಂದ ನಿನ್ನ ಹೆಸರನ್ನು….

ಮದಕರಿ ನಾಯಕ…

ಎಂದು ಘೋಷಿಸುತ್ತಿದ್ದೇವೆ… ಶುಭವಾಗಲಿ…ಹೂಂ… ಹೊರಡು… ಚಿಂತಿಸಬೇಡ… ಅಪ್ಪನ ಸಾವಿಗೆ ಹೆದರಬೇಡ… ದುರ್ಗಕ್ಕೆ ದ್ರೋಹ ಬಗೆದವರೆಂದೂ ಉದ್ಧಾರವಾಗಲಾರರು… ಸಂಪಿಗೆ ಸಿದ್ದೇಶ್ವರನೂ ಏಕನಾಥಿಯೂ ನಿನ್ನನ್ನು ಹರಸಲಿ… ಶಂಭೋ ಮಹಾದೇವ…

ಇದೇನು ಕನಸೋ ಎಂಬಂತೆ ಓಬಣ್ಣ ಕಣ್ತೆರೆದು ನೋಡಿದ… ರಸಾಸಿದ್ಧರು ಅದಾಗಲೇ ಬಹುದೂರಕ್ಕೆ ಸಾಗಿ ಹೋಗಿದ್ದರು… ಗರ್ಭಗುಡಿಯೊಳಗಿನ ನಂದಾದೀಪ ಎಂದಿಗಿಂತ ಜಾಜ್ವಲ್ಯಮಾನವಾಗಿ ಬೆಳಗುತ್ತಿತ್ತು… ಅಸೀಮ ಧೈರ್ಯದಿಂದ ಎದ್ದು ಹೊರಬಂದ ಓಬಣ್ಣನ ಮೈಯ್ಯಲ್ಲೇನೋ ಹೊಸ ಚೈತನ್ಯ ತುಂಬಿ ನಿಂತಿತ್ತು… ರಸಾಸಿದ್ಧರ ಮಾತುಗಳನ್ನು ಕೇಳಿದ್ದ ಪುರೋಹಿತರು ಹೊರಬಂದು ಎತ್ತರದ ದನಿಯಲ್ಲಿ ಘೋಷಿಸಿದರು….

ಮದಕರಿ ನಾಯಕರಿಗೆ ಜಯವಾಗಲಿ….

ಜಯವಾಗಲಿ… ಜಯವಾಗಲಿ… ಬಂಡೆ ಬಂಡೆಗೂ ಬಡಿದು ಪ್ರತಿಧ್ವನಿ ಏಳುತ್ತಿತ್ತು… ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿತ್ತು….

ಚಿತ್ರಕಲ್ಲುದುರ್ಗಕ್ಕೆ ಮದಕರಿ ನಾಯಕರೆಂಬೋ ನಾಯಕರು ದಕ್ಕಿದ್ದು ಹೀಗೆ…

ಮಿಕ್ಕಿದ್ದು ನಾಳೆಗೆ…

Share254Tweet159Send
ADVERTISEMENT
ಧರ್ಮೇದ್ರ ಕುಮಾರ್ ಅರೇನಹಳ್ಳಿ

ಧರ್ಮೇದ್ರ ಕುಮಾರ್ ಅರೇನಹಳ್ಳಿ

Related Posts

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

by Harini Bengaluru
December 23, 2022
0

ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ………. ದೀರ್ಘವಾದರು ತಿನ್ನುವ ಅನ್ನಕ್ಕೆ - ರೈತರಿಗೆ ಪ್ರತಿ ವಂದನೆ ಸಲ್ಲಿಸಲು -...

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-38

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-38

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 16, 2021
0

ಬಿಚ್ಚುಗತ್ತಿ ಭರಮಣ್ಣ ನಾಯಕ...  ಸಾಕ್ಷಾತ್ ಮೃತ್ಯುವಿನಂತೆ ಎದುರು ನಿಂತ ಭರಮಣ್ಣ ನಾಯಕನನ್ನು ನೋಡಿ ಒಂದು ಕ್ಷಣ ಎದೆ ಧಸಕ್ಕೆಂದಿತು... ಭರಮಣ್ಣನೇನೂ ಮೇಲೆರಗಲು ಬಂದವನಂತಿರಲಿಲ್ಲ... ಆದರೆ... ಅವನ ಮುಖವೇನೋ...

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 15, 2021
0

ಅವನ ಜೊತೆಗಾರರೂ ಏನು ಕಡಿಮೆಯವರಲ್ಲ... ಖಾನ್ ಜಾದ್ ಖಾನ್ , ಮುರಾದ್ ಖಾನ್ ಕಾಮ್ ಭಕ್ಷ್ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಕಲಿವೀರರೇ... ಇಂಥ ಅತಿರಥ ಮಹಾರಥರನ್ನೇ ಮುಂಚೂಣಿ...

ಭಾರತದ ದೊಡ್ಡ ನಾಗರ ಶಿಲ್ಪ…

ಭಾರತದ ದೊಡ್ಡ ನಾಗರ ಶಿಲ್ಪ…

by Harini Bengaluru
May 13, 2021
0

ಪುರಾಣ ಪ್ರಸಿದ್ಧ ಕ್ಷೇತ್ರಗಳನ್ನು ಮತ್ತಷ್ಟು ಮೆರುಗುಗೊಳಿಸುವ ಪ್ರಯತ್ನಗಳು ಇತ್ತೀಚೆಗೆ ಬಹಳ ನಡೆಯುತ್ತಿದೆ. ಅಂತಹ ಪ್ರಯತ್ನಕ್ಕೊಂದು ಸೇರ್ಪಡೆ ತೆಲಂಗಾಣದ ಕರೀಂನಗರ್ ನಿಂದ ವೇಮುಲವಾಡ ಗೆ ಹೋಗುವ ದಾರಿಯಲ್ಲಿ 5...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet