• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

May 15, 2021
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಗರುಡಪುರಾಣ ಸಿನಿಮಾದ ಟೀಸರ್ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

September 26, 2023
ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ

ಮತ ಸೆಳೆಯಲು ಮಹಿಳಾ ಮೀಸಲಾತಿ ಮಸೂದೆ ತರುತ್ತಿದ್ದಾರೆ ಹೊರತು ಮಹಿಳೆಯರ ಮೇಲೆ ಕಾಳಜಿಯಿಂದಲ್ಲ: ಸಿದ್ದರಾಮಯ್ಯ

September 26, 2023
ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

ಕಾವೇರಿ ಸಮಸ್ಯೆ ಪರಿಹರಿಸಲು ಎಲ್ಲ ಪಕ್ಷದ ನಾಯಕರಿಗೆ ನಟ ಕಿಚ್ಚ ಸುದೀಪ್​ ಬಹಿರಂಗ ಪತ್ರ

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ಬೆಂಗಳೂರು ಬಂದ್​ಗೆ ಪೊಲೀಸರು ಫುಲ್​ ಅಲರ್ಟ್.. ಟೌನ್ ಹಾಲ್ ಬಳಿ 250ಕ್ಕೂ ಹೆಚ್ಚು ಪೊಲೀಸರ ಬಂದೋಬಸ್ತ್..!

September 26, 2023
ಸೆಪ್ಟೆಂಬರ್ 11 ಕ್ಕೆ ಬೆಂಗಳೂರು ಬಂದ್; 32 ಸಂಘಟನೆಗಳ ಬೆಂಬಲ

ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಸ್ತಬ್ಧವಾಗಲಿದೆ ರಾಜಧಾನಿ..!

September 25, 2023
ಕನ್ನಡದ ಬಿಗ್ ಬಾಸ್ 10 – ಅಕ್ಟೊಬರ್ 8ರಿಂದ ಶುರು

ಫಸ್ಟ್ ಟೈಮ್ ಬಿಗ್ ಬಾಸ್ 10 ಮನೆಗೆ ಹೋಗುವ ಸ್ಪರ್ಧಿಯ ಹೆಸರು ರಿವೀಲ್ ಮಾಡಿದ ಕಲರ್ಸ್ ವಾಹಿನಿ

September 24, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ವಿಕ್ರಮ್ ಲ್ಯಾಂಡರ್ ಪುನಶ್ಚೇತನಕ್ಕೆ 14 ದಿನ ಕಾಯಲಿದೆ ಇಸ್ರೊ

September 24, 2023
ಕೆರೆಗಳನ್ನು ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣ ಕಾರ್ಯಗಳಿಗೆ ಒತ್ತು ನೀಡಿ: ಸಣ್ಣ ನೀರಾವರಿ ಸಚಿವ ಎನ್. ಎಸ್ ಬೋಸರಾಜು ಸೂಚನೆ – ವಿಕಾಸಸೌಧದಲ್ಲಿಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಸೆ.​​​ 26ರಂದು ಬೆಂಗಳೂರು ಬಂದ್​​ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ..!

September 23, 2023
ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..!

September 23, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಅಲೆಮಾರಿ

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 15, 2021
in ಅಲೆಮಾರಿ
287 2
0
ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-37
563
SHARES
1.6k
VIEWS
Share on FBShare on TwitterShare on whatsapp
+1
0

ಅವನ ಜೊತೆಗಾರರೂ ಏನು ಕಡಿಮೆಯವರಲ್ಲ… ಖಾನ್ ಜಾದ್ ಖಾನ್ , ಮುರಾದ್ ಖಾನ್ ಕಾಮ್ ಭಕ್ಷ್ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಕಲಿವೀರರೇ… ಇಂಥ ಅತಿರಥ ಮಹಾರಥರನ್ನೇ ಮುಂಚೂಣಿ ನಾಯಕರಾಗಿ ಹೊಂದಿದ್ದ ಮುಘಲರ ಪಡೆ ಅಕ್ಷರಶಃ ಯಮಕಿಂಕರರಂತೆ ಬಡಿದಾಡುತ್ತಿತ್ತು… ಆದರೇ…

ಭರಮಣ್ಣ ತಂತ್ರಜ್ಞ… ಯುದ್ಧ ತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ಅವನನ್ನು ಮೀರಿಸಿದವರೇ ಇರಲಿಲ್ಲ… ರಣ ಭೂಮಿಗೆ ಇಳಿಯುವ ಮೊದಲೇ ಶತ್ರುವಿನ ಆಳ ಅಗಲಗಳನ್ನು ಲೆಕ್ಕ ಹಾಕಿದ್ದ… ಅವರ ಶಕ್ತಿ ಸಾಮರ್ಥ್ಯಗಳೇನು ಬಲಹೀನತೆಗಳೇನು ಎಂಬುದನ್ನೆಲ್ಲ ಕೂಲಂಕಷ ಪರಿಶೀಲಿಸಿ ಅರಿತುಕೊಂಡೇ ದಾಳ ಉರುಳಿಸಿದ್ದ…

ಎಲ್ಲರ ಬಲಹೀನತೆಗಳನ್ನೂ ತೂಗಿ ನೋಡುವಾಗ ಅವನಿಗೆ ವಜ್ರಾಯುಧದಂಥ ರಹಸ್ಯವೊಂದು ದಕ್ಕಿಬಿಟ್ಟಿತು… ಅದು… ಖಾಸಿಂ ಖಾನ್ ಒಬ್ಬ ವ್ಯಸನಿ… ಅಫೀಮು ಗಾಂಜಾದ ವ್ಯಸನಿ… ಊಟ ತಿಂಡಿ ನೀರು ನಿದ್ದೆಗಳನ್ನು ಬಿಟ್ಟಾನೂ… ಉಹೂಂ… ಗಾಂಜಾ ಬಿಡೋನಲ್ಲ…

ಗೆಲುವಿನ ನಗೆಯೊಂದು ಭರಮಣ್ಣನ ಮುಖದ ಮೇಲೆ ಹಾದುಹೋಯಿತು… ಈ ಮುಘಲರನ್ನ ಆಡಿಸಿ , ಓಡಾಡಿಸಿ , ಕಾಡಿಸಿ , ಪೀಡಿಸಿ , ಇಂಚಿಂಚೇ ಕತ್ತರಿಸಿ ಕೊಲ್ಲಬೇಕು… ಉಹೂಂ… ಒಂದೇ ದಿನಕ್ಕೆ ಮುಗಿಯುವ ಯುದ್ಧವಲ್ಲ ಇದು… ಮುಗಿಯಲೂ ಬಾರದು… ಹೊತ್ತೇರುತ್ತಿದ್ದಂತೆ ಯುದ್ಧ ಆರಂಭಿಸಿದರೆ ಹೊತ್ತು ಮುಗಿದರೂ ಓಡಾಡಿಸಿಕೊಂಡು ಬಡಿಯುತ್ತಿರಬೇಕು… ಹೊತ್ತು ಮುಳುಗಿ ಕತ್ತಲಾದರೂ ನಿಂತಲ್ಲಿ ನಿಲ್ಲಲೂ ಸಹ ಬಿಡಬಾರದು…

ಭರಮಣ್ಣನ ಮಿದುಳಿನೊಳಗೇ ಓಡುತ್ತಿದ್ದ ಆಲೋಚನೆಗಳನ್ನು ಗ್ರಹಿಸುತ್ತಾ ನಿಂತಿದ್ದ ಹಿರೇ ಮದಕರಿ ನಾಯಕನಿಗೆ ಭರಮಣ್ಣ ಮುಂದಿನ ನಾಲ್ಕು ದಿನಗಳ ಯುದ್ಧೋಪಾಯಗಳನ್ನು ಹೇಳಿಕೊಟ್ಟ…

ಶುರುವಾಯಿತು ಘನಘೋರ ಯುದ್ಧ… ಸಮಬಲರ ಕಾದಾಟ… ಭರಮಣ್ಣನ ಯೋಜನೆ ಅಷ್ಟೂ ಬೇಡರ ಕಿವಿಗೆ ತಲುಪಿತ್ತು… ಕರಾರುವಾಕ್ಕಾಗೇ ಕದನ ಆರಂಭಿಸಿದರು…

ಮೊದಲ ದಿನ… ಹೊತ್ತೇರಿ ದಿನ ಕಳೆದು ದಿನಕರ ಸರಿಯುತ್ತಿದ್ದಂತೆ ಕದನ ವಿರಾಮ… ಎರಡನೇ ದಿನ , ಮೂರನೇ ದಿನವೂ ಇದು ಮುಂದುವರೆಯಿತು…

ನಾಲ್ಕನೇ ದಿನ ಬಂತು… ನಿಧಾನವಾಗೇ ಆರಂಭಿಸಿದ ದುರ್ಗದ ಸೈನಿಕರು ಆಡುತ್ತಾ ಆಡಿಸುತ್ತಾ ಸಂಜೆಯಾಗುವುದನ್ನೇ ಎದುರು ನೋಡುತ್ತಿದ್ದರು… ಕತ್ತಲು ಮುಸುಕುತ್ತಿದ್ದಂತೆ ವಿರಮಿಸಲು ಅಣಿಯಾದ ವೈರಿ ಪಡೆಗೆ ಆಶ್ಚರ್ಯ ಕಾದಿತ್ತು… ಸಂಜೆ ವೇಳೆಗೆ ಬೇಡರ ರಭಸ ಹೆಚ್ಚಿತ್ತು… ತುಂಗೆಯ ನೀರಿನಲ್ಲಿ ಧಿಡೀರನೆ ಪ್ರವಾಹ ಉಕ್ಕಿದಂತೆ ಸಿಕ್ಕಸಿಕ್ಕವರನ್ನು ಕೊಚ್ಚಲು ಶುರುವಿಟ್ಟರು… ಕೂತ ಕುದುರೆಯಿಂದ ಇಳಿಯಲೂ ಬಿಡದೇ ಸತಾಯಿಸಿದರು… ಮಧ್ಯ ರಾತ್ರಿ… ಕೂತಕೂತಲ್ಲೆ ಒಂದು ಗಂಟೆ ನಿದ್ದೆ ತೆಗೆದ ಬೇಡರು ಶತ್ರು ಪಡೆಗೆ ಕಣ್ಣುಜ್ಜಿಕೊಳ್ಳಲೂ ಸಮಯ ಕೊಡದೆ ಕತ್ತರಿಸಿ ಹಾಕುತ್ತಿದ್ದರು…

ಮರುದಿನ ಬೆಳಿಗ್ಗೆ ನಾಲಕ್ಕು ಘಂಟೆ…

ಖಾಸಿಂ ಖಾನನ ಮೈ ತುರಿಸುತ್ತಿತ್ತು… ಕೈಕಾಲುಗಳು ಸಣ್ಣಗೆ ನಡುಗುತ್ತಿದ್ದವು… ಕೈಬೆರಳುಗಳು ಮಡಿಚಿಕೊಂಡು ಒಂದರೊಳಗೊಂದು ಸೇರಿಕೊಂಡು ಬಿಟ್ಟವು… ಕಾಲುಗಳು ಮುದುರಿಕೊಂಡು ಕುದುರೆಯಿಂದ ಧೊಪ್ಪನೆ ಕೆಳಕ್ಕೆ ಬಿದ್ದ ಸುಬೇದಾರ ತೆವಳುತ್ತಲೇ ತನ್ನ ಡೇರೆಯೊಳಕ್ಕೆ ಹೋಗಿ ಹಾಸಿಗೆಯಡಿಗೆ ಕೈ ತೂರಿಸಿ ಸರಕನ್ನು ಹೊರತೆಗೆದು ನೋಡಿದ…

ಎರಡು ಚಿಟಿಕೆ ಗಾಂಜಾ… ಫಕ್ಕನೆ ಎತ್ತಿ ಆಘ್ರಣಿಸಿಕೊಂಡ… ಹೋದ ಜೀವ ಬಂದಂತಾಯಿತು… ಹುಚ್ಚನಂತೆ ಇನ್ನಷ್ಟು ಸರಕಿಗಾಗಿ ಡೇರೆಯೊಳಗೆಲ್ಲ ಹುಡುಕಾಡಿದ… ಎಲ್ಲಿತ್ತು… ಒಂದೇ ದಿನದಲ್ಲಿ ಯುದ್ಧ ತೀರಿಸಿಬಿಡುತ್ತೇನೆಂದು ಅತಿಯಾದ ಆತ್ಮವಿಶ್ವಾಸದೊಂದಿಗೆ ಬಂದಿದ್ದ… ಮಾಲು ಮುಗಿದು ಹೋಗಿತ್ತು… ಯುದ್ಧವಿನ್ನೂ ಉಳಿದಿತ್ತು… ರೋಷಾಗ್ನಿಯಿಂದ ಗಂಟಲು ಹರಿಯುವಂತೆ ಅರಚುತ್ತಾ ಡೇರೆಯ ಹೊರಕ್ಕೆ ಬಂದು ನೋಡಿದ…

ಕಾಮಗೇತಿ ವಂಶದ ಶಿಖರಾಗ್ರ ಮಣಿ… ಕೆಂಪು ಕಲ್ಲಿನಂತೆ ರವರವನೇ ಉರಿಯುತ್ತಾ… ತಾಂಡವ ನೃತ್ಯಕ್ಕೆ ಅಣಿಯಾಗಿ ನಿಂತ ರುದ್ರನಂತೆ… ಭ್ರೂ ಮಧ್ಯದ ಹಣೆಗಣ್ಣನ್ನು ತೆರೆದು ಭೂಲೋಕವನ್ನೇ ಭಸ್ಮ ಮಾಡಬಲ್ಲ ಬೆಂಕಿಯಂತೆ ನಿಂತಿದ್ದ…

ಮುಂದುವರೆಯುತ್ತದೆ……

Share225Tweet141Send
ADVERTISEMENT
ಧರ್ಮೇದ್ರ ಕುಮಾರ್ ಅರೇನಹಳ್ಳಿ

ಧರ್ಮೇದ್ರ ಕುಮಾರ್ ಅರೇನಹಳ್ಳಿ

Related Posts

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

by Harini Bengaluru
December 23, 2022
0

ನಾವೆಲ್ಲರೂ ನೆನಪಿಡಬೇಕಾದ - ಪ್ರೀತಿಯಿಂದ - ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ………. ದೀರ್ಘವಾದರು ತಿನ್ನುವ ಅನ್ನಕ್ಕೆ - ರೈತರಿಗೆ ಪ್ರತಿ ವಂದನೆ ಸಲ್ಲಿಸಲು -...

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-38

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-38

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 16, 2021
0

ಬಿಚ್ಚುಗತ್ತಿ ಭರಮಣ್ಣ ನಾಯಕ...  ಸಾಕ್ಷಾತ್ ಮೃತ್ಯುವಿನಂತೆ ಎದುರು ನಿಂತ ಭರಮಣ್ಣ ನಾಯಕನನ್ನು ನೋಡಿ ಒಂದು ಕ್ಷಣ ಎದೆ ಧಸಕ್ಕೆಂದಿತು... ಭರಮಣ್ಣನೇನೂ ಮೇಲೆರಗಲು ಬಂದವನಂತಿರಲಿಲ್ಲ... ಆದರೆ... ಅವನ ಮುಖವೇನೋ...

ಭಾರತದ ದೊಡ್ಡ ನಾಗರ ಶಿಲ್ಪ…

ಭಾರತದ ದೊಡ್ಡ ನಾಗರ ಶಿಲ್ಪ…

by Harini Bengaluru
May 13, 2021
0

ಪುರಾಣ ಪ್ರಸಿದ್ಧ ಕ್ಷೇತ್ರಗಳನ್ನು ಮತ್ತಷ್ಟು ಮೆರುಗುಗೊಳಿಸುವ ಪ್ರಯತ್ನಗಳು ಇತ್ತೀಚೆಗೆ ಬಹಳ ನಡೆಯುತ್ತಿದೆ. ಅಂತಹ ಪ್ರಯತ್ನಕ್ಕೊಂದು ಸೇರ್ಪಡೆ ತೆಲಂಗಾಣದ ಕರೀಂನಗರ್ ನಿಂದ ವೇಮುಲವಾಡ ಗೆ ಹೋಗುವ ದಾರಿಯಲ್ಲಿ 5...

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-17

ದುರ್ಗದ ವೀರ ಅರಸರ ಚರಿತೆ… ಅಧ್ಯಾಯ-36

by ಧರ್ಮೇದ್ರ ಕುಮಾರ್ ಅರೇನಹಳ್ಳಿ
May 10, 2021
0

ಇಪ್ಪತ್ತು ಸಾವಿರದಷ್ಟಿದ್ದ... ಆರಡಿ ಎತ್ತರದ , ಧೃಢಕಾಯರಾದ , ಕರ್ರನೆ ಮಿರಿಮಿರಿ ಮಿಂಚುತ್ತಿದ್ದ ನಾಗರ ಹೆಡೆಯಂತೆ ಹರಡಿಕೊಂಡಿದ್ದ ವಿಶಾಲವಾದ ಎದೆಯುಳ್ಳ , ಎಂಥವನನ್ನೂ ಸೀಳಿ ಹರಿದು ಹಾಕಬಲ್ಲ...

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!

September 26, 2023
ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಇದೇ ಮೊದಲು, ಬೆಂಗಳೂರು ಮೂಲದ ಮೂಕ ವಕೀಲೆ ವಾದ!

September 26, 2023
ಕಾವೇರಿ ವಿವಾದ: ವಿರೋಧ, ಪ್ರತಿಭಟನೆಗಳ ನಡುವಲ್ಲೇ ತಮಿಳುನಾಡಿಗೆ ನೀರು ಬಿಡುಗಡೆ

ಪ್ರತಿಭಟನೆ ಮಧ್ಯೆ ಕರ್ನಾಟಕಕ್ಕೆ ಬಿಗ್ ಶಾಕ್.. ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ..!

September 26, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet