• Latest
  • Trending
  • All
  • News
  • Business
  • Politics
  • Science
  • World
  • Lifestyle
  • Tech
‘ಚಿರಸ್ಮಿತ’ ಭಾಗ-19

‘ಚಿರಸ್ಮಿತ’ ಭಾಗ-47

August 19, 2021
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾಯ್ತು ಕುಳಿ! ಮಾರ್ಗ ಬದಲಿಸಿದ ಇಸ್ರೋ

ಎರಡು ವಾರಗಳ ವಿರಾಮದ ಬಳಿಕ ಚಂದ್ರಯಾನ ಪುನಶ್ಚೇತನ: ಇಸ್ರೊ ಪ್ರಯತ್ನ

September 21, 2023
ಕಾವೇರಿ ವಿವಾದ: ತಮಿಳು ನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್ 6ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಕಾವೇರಿ ಹೋರಾಟಕ್ಕೆ ಧುಮುಕಿದ ಮೊದಲ ಕನ್ನಡ ನಟ ದರ್ಶನ್‌ ತೂಗುದೀಪ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ಸೆ.20ರಂದು ಈ ಎರಡು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ; ಉಳಿದ ಕಡೆ ಹಗುರ, ಸಾಧಾರಣ

September 20, 2023
ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

ಕದ್ದು ಮುಚ್ಚಿ ಪ್ರೀತಿ ಮಾಡೋಕೆ ನನಗೆ ಇಷ್ಟವಿಲ್ಲ: ಸ್ಪಷ್ಟನೆ ಕೊಟ್ಟ ಭವ್ಯಾ ಗೌಡ ‘ಗೀತಾ’

September 20, 2023
ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

ನಾರ್ಮಲ್ ಡೆಲಿವರಿಯಲ್ಲಿ ತುಂಬಾ ಕಿರುಚಾಟ ಇರುತ್ತೆ ಗಾಬರಿ ಆಗಿಬಿಟ್ಟೆ: ಪತ್ನಿ ಬಗ್ಗೆ ಧ್ರುವ ಸರ್ಜಾ

September 20, 2023
ಮಾತಿನ ಶೂರ ಮೋದಿ ಎಲ್ಲಿದ್ದಾರೆ? : ಸಿದ್ದರಾಮಯ್ಯ ವ್ಯಂಗ್ಯ

ಜನ ಸಂಪರ್ಕಕ್ಕೆ ವಾಟ್ಸಪ್‌ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ! ನೀವೂ ಸೇರಬಹುದು- ಇಲ್ಲಿದೆ ಲಿಂಕ್‌

September 20, 2023
ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

ಬೆಂಗಳೂರು ಸುತ್ತಲಿನ 75,000 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ! ತನಿಖೆಗೆ ಸಿಎಂ ಆದೇಶ

September 19, 2023
ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

September 19, 2023
ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು ಚಕ್ರವರ್ತಿ ಸೂಲಿಬೆಲೆ

September 19, 2023
Sakhigeetha
  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team
No Result
View All Result
Sakhigeetha
No Result
View All Result
Home ಸಂಸ್ಕೃತಿ - ಸಾಹಿತ್ಯ

‘ಚಿರಸ್ಮಿತ’ ಭಾಗ-47

by SakhiGeetha Reporter
August 19, 2021
in ಸಂಸ್ಕೃತಿ - ಸಾಹಿತ್ಯ
254 2
0
‘ಚಿರಸ್ಮಿತ’ ಭಾಗ-19
498
SHARES
1.4k
VIEWS
Share on FBShare on TwitterShare on whatsapp
0
0

ನಲವತ್ತೇಳು
ಸಂಜೆ ಏಳಾದರೂ ಭಾರತೀಪ್ರಿಯ ಮನೆಗೆ ಬರಲಿಲ್ಲ. ಸುಹಾಸಿನಿ ಹೆದರಲಿಲ್ಲ. ಎಲ್ಲಿಯೋ ಗೆಳೆಯರೊಂದಿಗೆ ಸುತ್ತುತ್ತಿರಬೇಕು ಎಂದುಕೊಂಡಳು. ಸುಮಾರು ಹತ್ತುಗಂಟೆಗೆ ಅವನು ಬಂದು ಅವನು ತಂಗಿದ್ದ ಮನೆಗೆ ಹೋಗಿದ್ದು ತಿಳಿಯಿತು.
“ಊಟ ಮಾಡುವೆಯಾ?” ಎಂದಳು ರೂಮಿನ ಕಿಟಕಿಯ ಮೇಲೆ ಬಡಿದು.
“ನನ್ನ ಊಟ ಆಯ್ತು. ಸಿನಿಮಾಗೆ ಹೋಗಿದ್ದೆ. ಹಾಗೇ ಹೊಟೇಲಿನಲ್ಲಿ ತಿಂದೆವು” ಎಂದ. ಅವನು ಮಲಗಿ ಮಾತಾಡುತ್ತಿರುವನೆಂದು ಅವನ ಸ್ವರ ಬರುತ್ತಿದ್ದ ರೀತಿಯಿಂದಲೇ ತಿಳಿದುಕೊಂಡಳು.
“ಯಾವ ಸಿನಿಮಾ ಮಗೂ?” ಎಂದು ಕೇಳಿದಳು.
“ಬೇಡರ ಕಣ್ಣಪ್ಪ ಅಂತ ಅಮ್ಮಾ. ಯಾರೋ ಹೊಸನಟ. ರಾಜಕುಮಾರ್ ಅಂತೆ. ಕಣ್ಣಪ್ಪನಾಗಿ ಅಭಿನಯ ಬಹಳ ಚೆನ್ನಾಗಿದೆ” ಎಂದ ಉತ್ಸಾಹದ ಸ್ವರದಲ್ಲಿ.
ಅವಳೆಂದೂ ಸಿನಿಮಾಗೆ ಹೋದ ನೆನಪಿಲ್ಲ. ಇತ್ತೀಚೆಗೆ ಅವಳು ಸ್ಟಾಫ್‍ರೂಮಿನಲ್ಲಿ ಕುಳಿತಿದ್ದಾಗ ಉಳಿದ ಟೀಚರುಗಳು, ಮೇಷ್ಟರುಗಳು ಮಾತಾಡಿಕೊಳ್ಳುವುದಿತ್ತು.
‘ಎರಡುವರ್ಷಗಳ ಹಿಂದೆ ಹರಿಣಿ ನಟಿಸಿದ ಜಗನ್ಮೋಹಿನಿ ನೋಡಿದೆ. ಬಹಳ ಚೆನ್ನಾಗಿದೆ ಚಿತ್ರ!’
‘ಹೊನ್ನಪ್ಪ ಭಾಗವತರ ಗುಣಸಾಗರಿ, ಕೆಂಪರಾಜ ಅರಸರ ರಾಜಾ ವಿಕ್ರಮ ಕೂಡ ಒಳ್ಳೆಯ ಸಿನಿಮಾ’
ಹೀಗೇ ಹಲವಾರು ಮಾತುಗಳನ್ನು ಕೇಳಿದ್ದಳು. ಅವಳಿಗೇಕೋ ಸಿನಿಮಾಗಳಿಗೆ ಹೋಗುವ ಅವಕಾಶವೇ ಬಂದಿರಲಿಲ್ಲ. ಹಾಗೆ ನೋಡಿದರೆ ಹೋಗಬೇಕೆಂದೂ ಅನ್ನಿಸಿರಲಿಲ್ಲ.
“ಅಮ್ಮಾ, ನನಗೆ ಇನ್ನೊಂದು ಸಲ ನೋಡಬೇಕೆನ್ನಿಸಿದೆ. ನಾನೂ, ನೀನೂ ಹೋಗೋಣ” ಎಂದ ಒಳಗಿನಿಂದಲೇ.
“ಸರಿ!” ಎಂದು ಅಲ್ಲಿಂದ ಹೊರಟು ತನ್ನ ಮನೆಗೆ ಬಂದುಬಿಟ್ಟಳು.
ಅವನು ಒಳಗೆ, ತಾನು ಹೊರಗೆ ನಿಂತು ಪಂಕಜಳ ವಿಷಯ ಕೇಳಿದರೆ ಚೆನ್ನಾಗಿರುವುದಿಲ್ಲ ಎಂದುಕೊಂಡು ಮಲಗಿದಳು.
ಮರುದಿನ ಬೆಳಿಗ್ಗೆ ಯಥಾಪ್ರಕಾರ ಭಾರತೀಪ್ರಿಯ ಕೆಲಸಕ್ಕೆ ಹೊರಟುಬಿಟ್ಟ. ಸುಹಾಸಿನಿಗೆ ಅವನನ್ನು ಕೆಲಸಕ್ಕೆ ಹೋಗುವಾಗ ಪಂಕಜಳ ವಿಷಯ ಕೇಳಲು ಮನಸ್ಸು ಬರಲಿಲ್ಲ. ಹಾಗೆಂದು ಈ ವಿಷಯವನ್ನು ಮುಂದೂಡುವುದೂ ತಪ್ಪಾಗುತ್ತದೆ. ತಾನು ಕೂಡ ನಾಗಜ್ಜಿಗೆ ವಿಷಯ ಹೇಳಿದ್ದು ತಡವಾಗಿಯೇ.
ನಾಲ್ಕನೆಯ ದಿನ ಬೆಳಿಗ್ಗೆ ಮಗ ತಿಂಡಿ ತಿನ್ನುತ್ತಿರುವಾಗ “ಮಗೂ, ಸಿನಿಮಾ.. ಬೇಡರ ಕಣ್ಣಪ್ಪ.. ಎಂದೆಯಲ್ಲ… ಯಾವಾಗ ಕರೆದುಕೊಂಡು ಹೋಗುತ್ತೀ?” ಎಂದಳು ಸುಹಾಸಿನಿ.
ತಾಯಿಯ ಮಾತು ಯಾವಾಗಲೂ ಕರಾರುವಾಕ್ ಆಗಿ ಇರುವುದನ್ನೇ ಕೇಳಿಸಿಕೊಂಡಿದ್ದ ಭಾರತೀಪ್ರಿಯ ತಲೆ ಬಗ್ಗಿಸಿ ತಿನ್ನುತ್ತಿದ್ದವನು ತಟ್ಟೆಯಿಂದ ಚಕಿತನಾಗಿ ತಾಯಿಯತ್ತ ನೋಡಿದ. ಇದೇನು? ಅಮ್ಮ ಸಿನಿಮಾಗೆ ಕರೆದೊಯ್ಯುವ ವಿಷಯದಲ್ಲಿ ಹಿಂದೆಗೆತ ತೋರುತ್ತಿದ್ದಾರೆ?
“ಈ ಭಾನುವಾರ ಹೋಗೋಣ ಅಮ್ಮಾ. ನಾನು ಹೋಗಿ ಟಿಕೆಟ್ ತೆಗೆದುಕೊಂಡಿರುತ್ತೇನೆ ಮ್ಯಾಟ್ನಿಗೆ. ನೀನು ಷೋ ಶುರುವಾಗುವ ಮೊದಲು ಬಂದುಬಿಡು” ಎಂದ ಮೇಲೆದ್ದು ಕೈ ತೊಳೆದುಕೊಳ್ಳುತ್ತಾ.
ಅವನು ಹೊರಟಾಗ ಅವನ ಕೈಗೆ ಬುತ್ತಿ ನೀಡಿ, “ಮೂರು ಟಿಕೆಟ್ ತಗೋ ಭಾರತೀ…! ನನ್ನ ಗೆಳತಿಯೊಬ್ಬಳು ಬರುತ್ತಿದ್ದಾಳೆ” ಎಂದಳು. ಅವನಿಗೆ ಮತ್ತಷ್ಟು ಅಚ್ಚರಿ! ಸಿನಿಮಾಗೆ ಬರುವುದು ಒಂದು ಆಶ್ಚರ್ಯವಾದರೆ ಗೆಳತಿಯನ್ನು ಕರೆತರುವುದು…. ನಿಜಕ್ಕೂ ಅಚ್ಚರಿಯ ಸಂಗತಿ!!
ಅವನು ಹೋದ ಮೇಲೆ ಆಲೋಚಿಸಿದಳು. ಹೇಗೂ ಭಾನುವಾರ ಬೆಳಿಗ್ಗೆ ಪಂಕಜಳನ್ನು ಬರಹೇಳಿದ್ದಾಳೆ….
ಭಾನುವಾರ ಬಂದೇ ಬಂದಿತು. ಯಥಾಪ್ರಕಾರ ಭಾರತೀಪ್ರಿಯ ಬೆಳಿಗ್ಗೆಯೇ ಹೊರಟುಬಿಟ್ಟ, ಸಿನಿಮಾ ಥಿಯೇಟರಿಗೆ ಅಮ್ಮನನ್ನು ಬರಹೇಳಿ.
“ನನ್ನ ಗೆಳತಿ… ಟಿಕೆಟ್ ಮರೀಬೇಡ” ಎಂದಳು ಸುಹಾಸಿನಿ ನೆನಪಿಸುವಂತೆ.
“ಖಂಡಿತ. ಥಿಯೇಟರ್ ಗೊತ್ತು ತಾನೇ? ಅರಮನೆಯ ಹತ್ತಿರ ಹಾರ್ಡಿಂಜ್ ಸರ್ಕಲ್…” ಎಂದು ಹೇಳಿ ಬೈಸಿಕಲ್ ಹತ್ತಿ ಹೊರಟುಹೋದ.
ಅವನು ಅತ್ತ ಹೊರಡುತ್ತಿದ್ದಂತೆ ಪಂಕಜ ಬೆದರುತ್ತಲೇ ಒಳಗೆ ಬಂದಿದ್ದಳು. ಅವಳ ಆತಂಕ ಸುಹಾಸಿನಿಗೆ ಅರ್ಥವಾಗದ್ದೇನಲ್ಲ. ಅದೇ ದೋಣಿಯಲ್ಲಿ ತೇಲಿದವಳಲ್ಲವೇ ತಾನು?
“ನನ್ನ ತಂದೆಗೆ ಇನ್ನೂ ಹೇಳಿಲ್ಲ. ನಿಮ್ಮ ಮಗ ಕೂಡ ನಮ್ಮ ಅಂಗಡಿಯ ಬಳಿ ಸುಳಿದಿಲ್ಲ. ನಾನೇ ಅಂಗಡಿಯಲ್ಲಿರುತ್ತೇನೆ. ಇವತ್ತು ರಜಾ. ತಂದೆಯವರ ಆರೋಗ್ಯ ಸುಧಾರಿಸುತ್ತಿಲ್ಲ. ಯಾಕೋ ಅವರನ್ನು ನೋಡಿದರೆ ಭಯವಾಗುತ್ತೆ. ಟಿ.ಬಿ. ಇರಬಹುದು ಎನ್ನುತ್ತಿದ್ದಾರೆ ಗೌರ್ನಮೆಂಟ್ ಆಸ್ಪತ್ರೆಯಲ್ಲಿ”
“ನಿನಗೆ ಒಡಹುಟ್ಟಿದವರು, ತಾಯಿ …?” ಅರ್ಧೋಕ್ತಿಗೆ ನಿಲ್ಲಿಸಿದಳು.
“ಯಾರೂ ಇಲ್ಲ ಅಮ್ಮ” ಎಂದು ಅವಳು ಕಂಬನಿದುಂಬಿ ಹೇಳಿದಾಗ ಸುಹಾಸಿನಿ ಅವಳತ್ತ ಕಕ್ಕುಲತೆಯಿಂದ ನೋಡಿದಳು. ಯಾರೂ ಇಲ್ಲ ಎಂದು ಹೇಳಿದುದು ಸುಹಾಸಿನಿಯ ಮೆದುಳಿನಲ್ಲಿ ಮುದ್ರಿತವಾಯಿತು; ಆದರೆ ಅಮ್ಮ ಎಂದು ಅವಳು ಸಂಬೋಧಿಸಿದ್ದು ಅವಳ ಮನಸ್ಸಿನಲ್ಲಿ ಮಾರ್ದವತೆ ಮೂಡಿಸಿತು.
ತನ್ನನ್ನು ಈ ಹುಡುಗಿ ಅಮ್ಮ ಎನ್ನುತ್ತಿದ್ದಾಳೆ! ಅದೆಷ್ಟು ಚೆನ್ನಾಗಿ ಕೇಳಿಸುತ್ತಿದೆ ಈ ಶಬ್ದ!
ಒಮ್ಮೆ ಭಾರತೀಪ್ರಿಯನನ್ನೂ, ಪಂಕಜಳನ್ನೂ ಒಂದು ಸ್ಥಳದಲ್ಲಿ ಸೇರಿಸಬೇಕು. ಅವನ ಮುಖಭಾವವನ್ನು ಗಮನಿಸಬೇಕು. ಆ ನಂತರ ಮುಂದಿನ ಹೆಜ್ಜೆ ಎಂದುಕೊಂಡಳು. “ನಡಿ ಹೋಗೋಣ. ನಿನಗೆ ಸಂಜೆ ಏಳೂವರೆ ಹೊತ್ತಿಗೆ ಮನೆ ತಲುಪಿದರೆ ಪರವಾಗಿಲ್ಲ ಅಲ್ಲವೇ?” ಎಂದು ಕೇಳಿದಳು ಸುಹಾಸಿನಿ ಪಂಕಜಳನ್ನು.
“ಪರವಾಗಿಲ್ಲ ಅಮ್ಮ. ನನ್ನ ಅಪ್ಪನಿಗೆ ಹೇಳಿ ಬಂದಿದ್ದೇನೆ” ಎಂದಳು ಪಂಕಜ.
ಇಬ್ಬರೂ ಚಾಮುಂಡಿವನಂನಿಂದ ನಡೆದೇ ಅರಮನೆಯ ಮುಂದೆ ಬಂದರು. ಅರಮನೆಯನ್ನು ದಾಟಿ ಹಾರ್ಡಿಂಜ್ ಸರ್ಕಲ್ ಬಳಿ ಬಂದು ಅಲ್ಲಿಯೇ ಎಡಗಡೆಯಿದ್ದ ಮರಗಳ ಗುಂಪನ್ನು ದಾಟಿ ಎಡಗಡೆಗೆ ತಿರುಗಿದರು. ಆಗಲೇ ಆಷಾಢ ಮಾಸ ಬಂದಿದ್ದರಿಂದ ಗಾಳಿ ಜೋರಾಗಿ ಬೀಸುತ್ತಿತ್ತು.
ನ್ಯೂ ಅಪೇರಾ ಥಿಯೇಟರ್ ಮುಂದೆ ಬೇಡರ ಕಣ್ಣಪ್ಪ ಸಿನಿಮಾದ ಪೋಸ್ಟರ್ ಇತ್ತು. ಪಂಕಜಳಿಗೆ ಸಿನಿಮಾನಟರ ಪರಿಚಯವಿದ್ದುರಿಂದ “ಈಕೆ ಪಂಢರೀಬಾಯಿ, ಇವರು ಜಿ.ವಿ. ಅಯ್ಯರ್, ಇವರು ನರಸಿಂಹರಾಜು, ಕಣ್ಣಪ್ಪನ ಪಾತ್ರದಲ್ಲಿ ರಾಜಕುಮಾರ್ ಅಂತ ಹೊಸಬರಂತೆ” ಎಂದು ಪರಿಚಯಿಸಿದಳು.
ತಾನೆಂದೂ ಸಿನಿಮಾ ಥಿಯೇಟರ್‌ಗೆ ಬಂದಿಲ್ಲವೆಂದು ಸುಹಾಸಿನಿ ಹೇಳಲೇಬೇಕಿರಲಿಲ್ಲ. ಅವಳ ಬೆರಗುಗಣ್ಣುಗಳ ನೋಟವನ್ನು ಕಂಡ ಪಂಕಜ ತಾನೇ ಮುತುವರ್ಜಿ ವಹಿಸಿ ಒಳಗೆ ಕರೆದೊಯ್ದಳು. ಸಿನಿಮಾ ಆಗಲೇ ಎಂಬತ್ತು ದಿನಗಳಿಗೂ ಹೆಚ್ಚು ಕಾಲ ಪ್ರದರ್ಶಿತವಾಗಿದೆಯೆಂದು ಅಲ್ಲಿದ್ದ ಮತ್ತೊಂದು ಪೋಸ್ಟರ್ ನೋಡಿ ಪಂಕಜ ವಿವರಿಸಿದಳು.
ನ್ಯೂಸ್‍ರೀಲ್ ಶುರುವಾಗಿತ್ತು. ಅಮ್ಮನನ್ನು ಗುರುತಿಸಿದ ಭಾರತೀಪ್ರಿಯ ಪಂಕಜಳನ್ನು ಗುರುತಿಸಲಿಲ್ಲ. ಲಂಗ, ದಾವಣಿ ಬದಲು ಅವಳು ಸೀರೆ ಉಟ್ಟು ಎರಡು ಜಡೆಯ ಬದಲು ಒಂದು ಜಡೆ ಹಾಕಿಕೊಂಡಿದ್ದೂ ಕಾರಣವಿರಬಹುದು.
ಸಿನಿಮಾ ಥಿಯೇಟರಿನ ಜನಜಂಗುಳಿ, ಆ ಶಬ್ದ ಎಲ್ಲವೂ ಹೊಸತು ಸುಹಾಸಿನಿಗೆ. ಆದರೆ ಅವಳು ಬಂದಿರುವುದು ತನ್ನ ಮಗನ ವಿಷಯ ತಿಳಿಯಲು, ಪಂಕಜಳ ಭವಿಷ್ಯದ ಬಗೆಗೆ ನಿರ್ಧಾರ ತಳೆಯಲು. ಆದರೂ ಸಿನಿಮಾ ಅವಳಿಗೆ ಮುದ ನೀಡಿತ್ತು. ಕಣ್ಣಪ್ಪನ ಪಾತ್ರದ ರಾಜಕುಮಾರ್ ಅಭಿನಯ ಅವಳನ್ನು ಮಂತ್ರಮುಗ್ಧಳನ್ನಾಗಿ ಮಾಡಿತ್ತು.
ವಿರಾಮದ ವೇಳೆ ಥಿಯೇಟರಿನ ದೀಪಗಳು ಹೊತ್ತಿಕೊಂಡವು. ಆಗ ಗುರುತಿಸಿದ್ದ ಭಾರತೀಪ್ರಿಯ ಪಂಕಜಳನ್ನು! ಸುಹಾಸಿನಿಗೆ ಬೇರೇನೂ ಪುರಾವೆ ಬೇಕಿರಲಿಲ್ಲ. ಅವನೂ ಏನೂ ಮಾತಾಡಲಿಲ್ಲ. ನಿಜ ಹೇಳಬೇಕೆಂದರೆ ಮೂವರೂ ಮೌನವಾಗಿದ್ದು ಸಿನಿಮಾ ನೋಡಿದರು. ಕಣ್ಣಪ್ಪನ ಭಕ್ತಿಯ ಪರಾಕಾಷ್ಠೆ ಸುಹಾಸಿನಿಗೆ ಬಹಳವೇ ಇಷ್ಟವಾಗಿತ್ತು.
ಪಂಕಜ ಒಂಟಿಯಾಗಿ ಸಿಕ್ಕಾಗ ಮರುದಿನವೇ ಬರಲು ಸಾಧ್ಯವೇ ಎಂದು ಕೇಳಿ, ಅವಳ ಒಪ್ಪಿಗೆ ಸಿಕ್ಕಾಗ, ತನಗೆ ನಾಳೆ ಅರ್ಧದಿನ ಕೆಲಸವಿರುವುದೆಂದೂ, ಮಧ್ಯಾಹ್ನ ಬರಬೇಕೆಂದೂ ಹೇಳಿದಳು. ಮರುದಿನ ಹೇಳಿದ ಸಮಯಕ್ಕೆ ಪಂಕಜ ಬಂದಳು. ಅವಳ ಮೊಗದ ಮೇಲಿನ ಅನಿಶ್ಚಯತೆ ಸುಹಾಸಿನಿಯಲ್ಲಿ ಕರುಣೆ ಮೂಡಿಸಿತ್ತು.
ಡಾ. ಕೋಕಿಲ ಸುಹಾಸಿನಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, “ಬಾ ಬಾ ಚಿರಸ್ಮಿತಾ!” ಎಂದರು ಆದರದಿಂದ.
(ಸಶೇಷ)

– ಯತಿರಾಜ್ ವೀರಾಂಬುಧಿ

Tags: ChirasmithaYathiraj Veerambudhiಚಿರಸ್ಮಿತಯತಿರಾಜ್ ವೀರಾಂಬುಧಿ
Share199Tweet125Send
ADVERTISEMENT
SakhiGeetha Reporter

SakhiGeetha Reporter

Related Posts

ಸನಾತನ ಎಂದರೆ ಶಾಶ್ವತ ಎಂದರ್ಥ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಿದರೆ ಒಳಿತು: ನಿರ್ಮಲಾನಂದ ಸ್ವಾಮೀಜಿ

ಸನಾತನ ಎಂದರೆ ಶಾಶ್ವತ ಎಂದರ್ಥ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಿದರೆ ಒಳಿತು: ನಿರ್ಮಲಾನಂದ ಸ್ವಾಮೀಜಿ

by SakhiGeetha Reporter
September 9, 2023
0

ಸನಾತನ ಎಂದರೆ ಶಾಶ್ವತ ಎಂದರ್ಥ, ಅಂದರೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕೆಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ...

ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

by SakhiGeetha Reporter
September 6, 2023
0

ದೇಶದ ಹೆಸರನ್ನು ಭಾರತವೆಂದು ಬದಲಿಸಬೇಕೆಂಬ ಕೂಗು ಇಂದು ನಿನ್ನೆಯದ್ದಲ್ಲ, ವಿಪಕ್ಷ ಕೂಟ ಐಎನ್‍ಡಿಐಎ ಎಂದು ಇಟ್ಟುಕೊಂಡ ನಂತರ ಕೇಳಿಬಂದ ಕೂಗಲ್ಲ ಇದು. 2016, 2020ರಲ್ಲಿ ಈ ಸಂಬಂಧ...

ಮದರಸಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ

ಚಿತ್ರಕಲಾ ಪರಿಷತ್ ನಲ್ಲಿ ಅಯೋಜಿತ ಕರಕುಶಲ ಮಾರಾಟ ಪ್ರದರ್ಶನಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಉದ್ಘಾಟಿನೆ

by SakhiGeetha Reporter
September 1, 2023
0

ದಿ ಸೋಕ್ ಮಾರ್ಕೆಟ್ ವತಿಯಿಂದ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿರುವ ಹತ್ತು ದಿನಗಳ ಕರಕುಶಲ ಮಾರಾಟ ಮತ್ತು ಪ್ರದರ್ಶನ ಮೇಳಕ್ಕೆ ವಸತಿ ಸಚಿವ ಜಮೀರ್ ಅಹಮದ್...

ಭಾವಕೋಶಗಳಲ್ಲಿ ಹನಿ ಹನಿಯಾಗಿ ಇಳಿದರು ಅಮ್ಮ

ಭಾವಕೋಶಗಳಲ್ಲಿ ಹನಿ ಹನಿಯಾಗಿ ಇಳಿದರು ಅಮ್ಮ

by SakhiGeetha Reporter
August 30, 2023
0

ಕಳೆದ ಹತ್ತೊಂಭತ್ತರ ಸೋಮವಾರ ತೀರಿಕೊಂಡ ಅಮ್ಮ ಪ್ರಭಾವತಿಬಾಯಿ ಅವರ ಕ್ರಿಯಾ ಕರ್ಮಗಳನ್ನು ಕುಟುಂಬದವರು ಶ್ರದ್ಧೆಯಿಂದ ನೆರವೇರಿಸಿದೆವು. ಇದುವರೆಗೆ ಕಣ್ಣ ಮುಂದಿದ್ದ ಅಮ್ಮ ಇನ್ನು ಭಾವಕೋಶಗಳಲ್ಲಿ ಇಳಿದು ಚಿರಸ್ಥಾಯಿಯಾದರು....

  • Trending
  • Comments
  • Latest
ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ…?

July 22, 2021
ಕೊರೋನಾ ಮಾರಿಗೆ ಬಲಿಯಾದ  ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

ಕೊರೋನಾ ಮಾರಿಗೆ ಬಲಿಯಾದ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಕೆವಿಆರ್‌ ಠಾಗೋರ್ ….

May 12, 2021
ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ

August 7, 2023
ಪರಮ ವಿಷ್ಣು ಲೋಕ

ಪರಮ ವಿಷ್ಣು ಲೋಕ

4
ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

ಬೆಟ್ಟವೇರಿ ಬೆಟ್ಟದಂತ ಸಾಧನೆ ಮಾಡಿದ ಅರಮನೆ ನಗರಿಯ ಸಾಧಕಿ: ರುಕ್ಮಿಣಿ ಚಂದ್ರನ್

3
ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

ಸಿಡಿ ಕೋರರ ಹಿಸ್ಟರಿ; ಮತ್ತಷ್ಟು ರಾಜಕಾರಣಿಗಳಿಗೆ ಡವ…ಡವ…

2
ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

ಸಿಲಿಕಾನ್​ ಸಿಟಿಯಲ್ಲಿ ಲವ್​ ಜಿಹಾದ್​ ಪ್ರಕರಣ: ಕಾಶ್ಮೀರಿ ಯುವಕನ ವಿರುದ್ಧ ಮಹಿಳಾ ಟೆಕ್ಕಿಯ ಗಂಭೀರ ಆರೋಪ

September 21, 2023
ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

ಕಾವೇರಿ ವಿವಾದ, ಸುಪ್ರೀಂ ತೀರ್ಪು ಗಾಯದ ಮೇಲೆ ಬರೆ: ಸಿಟಿ ರವಿ

September 21, 2023
ಜನರೇ ಭಯಂಕರ ಮಳೆ ಎದುರಿಸಲು ಸಿದ್ಧರಾಗಿ; ಎಷ್ಟು ದಿನ ಬರಲಿದ್ದಾನೆ ಮೇಘರಾಜ?

ರಾಜ್ಯಕ್ಕೆ ತುಸು ನಿರಾಳ ನೀಡಿದ ಮಳೆರಾಯ: ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಎರಿಕೆ, ಆದರೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ರಾಜ್ಯ!

September 21, 2023
SakhiGeetha Women's Magazine

Copyright © 2021 sakhigeetha

Navigate Site

  • About Us
  • Team
  • Advertise
  • Privacy & Policy
  • Contact

Follow Us

  • Home
  • Language
    • English
      • Delivery of free food packets at all Indira canteens in BBMP limits from tomorrow
      • Govt plans to open physical triaging centres in 10 districts: Minister Arvind Limbavali
      • To buy groceries,vegetables and daily needs there is NO BAR for using vehicle
      • A new Covid Care Centre inaugurated in GKVK campus
      • Nearly 18 crore vaccine doses provided to States/UTs Free of Cost by Govt. of India
      • Don’t lose heart, we are with you-Murugesh Nirani; Nirani Foundation and Bilagi BJP unit come to the aid of COVID-19 patients
      • Vaccination for 18-44 age group in major govt hospitals and govt medical colleges from Monday, 10th May
      • 1800 beds available in KIMS and BMCRI : Minister Dr.K.Sudhakar
    • తెలుగు
    • தமிழ்
    • മലയാളം
  • News
    • Politics
      • ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ: ಸಚಿವ ಡಾ.ಕೆ.ಸುಧಾಕರ್
      • ಲಾಕ್ ಡೌನ್ ವೇಳೆ 14 ದಿನಗಳ ಕಾಲ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ವಿತರಣೆ – ಪೌರಾಡಳಿತ ಇಲಾಖೆಯಿಂದ ಮಹತ್ವದ ನಿರ್ಧಾರ
      • ಬೇಡಿಕೆ-ಪೂರೈಕೆಯಲ್ಲಿ ಪಾರದರ್ಶಕತೆ ತರಲು ಸರಕಾರದ ಕ್ರಮ – ಟೆಸ್ಟ್‌ ವರದಿ ತಡವಾದರೆ ಲ್ಯಾಬ್‌ಗಳಿಗೆ ದಂಡ
      • ಸಾಸ್ಟ್ ಪೋರ್ಟಲ್‌ ನಲ್ಲಿ ಆಮ್ಲಜನಕ, ರೆಮಿಡಿಸಿವರ್‌ ಜತೆಗೆ ಖಾಸಗಿ ಆಸ್ಪತ್ರೆಗಳ ಸರಕಾರಿ ಬೆಡ್‌ಗಳ ಮಾಹಿತಿ
      • ಜೆಮ್ ಶೆಡ್ ಪುರದಿಂದ ಬೆಂಗಳೂರಿಗೆ ಬಂತು 120 ಮೆಟ್ರಿಕ್ ಟನ್ ಆಕ್ಸಿಜನ್
    • Sports
    • World
    • Business
  • Entertainment
    • Music
    • Food
    • Movie
      • ಚಿತ್ರರಂಗದ ಸಂಗೀತ ಕಲಾವಿದರ ನೆರವಿಗೆ ನಿಂತ ಅಭಿನಯ ಸರಸ್ವತಿ ಬಿ. ಸರೋಜಾದೇವಿ
  • Team

Login to your account below

Forgotten Password?

Fill the forms bellow to register

All fields are required. Log In

Retrieve your password

Please enter your username or email address to reset your password.

Log In
Facebook
Facebook
fb-share-icon
Twitter
Visit Us
Tweet