ನೂತನ ಸಚಿವರಿಗೆ ಸಿಎಂ ಡಿಕೆಶಿ ಕಟ್ಟುನಿಟ್ಟಿನ ಸೂಚನೆ: ಮಳೆ-ಪ್ರವಾಹ ಪೀಡಿತ ಜಿಲ್ಲೆಗಳಿಗೆ ತಕ್ಷಣವೇ ಭೇಟಿ ನೀಡಲು ಆರ್ಡರ್!
ನೂತನ ಸಚಿವರಿಗೆ ಜಿಲ್ಲಾ ಪ್ರವಾಸ ಟಾಸ್ಕ್ 2026; ರಾಜ್ಯ ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಸಚಿವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಮಳೆ, ಪ್ರವಾಹ ಹಾಗೂ ಅನಾವೃಷ್ಟಿ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ನೂತನ ಸಚಿವರ ಮೊದಲ ಸಭೆಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಸಂಭ್ರಮದ ಬೆನ್ನಲ್ಲೇ ಸಚಿವರು ತಕ್ಷಣವೇ ಸಾರ್ವಜನಿಕ ಸೇವೆಗೆ ಧುಮುಕಬೇಕು ಎಂದು ಸ್ಪಷ್ಟಪಡಿಸಿದರು.
ಸಚಿವರ ಸಭೆಯ ಪ್ರಮುಖ ನಿರ್ಧಾರಗಳು:
ಸಿದ್ದರಾಮಯ್ಯ ಅಸಮಾಧಾನದ ವದಂತಿಗೆ ತೆರೆ: ಸಂಪುಟ ವಿಸ್ತರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೈರಾಗಿದ್ದಕ್ಕೆ ಯಾವುದೇ ಆಂತರಿಕ ಅಸಮಾಧಾನ ಕಾರಣವಲ್ಲ. ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದರೆ ಹೊರತು, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸಿಎಂ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ತಕ್ಷಣವೇ ‘ಫೀಲ್ಡ್ ವಿಸಿಟ್’ ಕಡ್ಡಾಯ: ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿ ಮತ್ತು ಮೂಲಸೌಕರ್ಯ ಹಾನಿಯ ಕುರಿತು ನೂತನ ಸಚಿವರು ಸ್ಥಳಕ್ಕೇ ತೆರಳಿ ಪರಿಶೀಲಿಸಬೇಕು.
ಕಂದಾಯ ಸಚಿವರಿಗೆ ವರದಿ ಸಲ್ಲಿಕೆ: ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಷ್ಟದ ಅಂದಾಜು ವರದಿಯನ್ನು ಸಿದ್ಧಪಡಿಸಿ ತಕ್ಷಣವೇ ಕಂದಾಯ ಸಚಿವರಿಗೆ ಸಲ್ಲಿಕೆ ಮಾಡಬೇಕೆಂದು ಸೂಚಿಸಲಾಗಿದೆ.
ಪಕ್ಷಾತೀತ ಪರಿಶೀಲನೆ: ಪ್ರವಾಹ ಅಥವಾ ಮಳೆ ಪರಿಹಾರ ಕಾರ್ಯಾಚರಣೆ ನಡೆಸುವಾಗ ಕೇವಲ ಆಡಳಿತ ಪಕ್ಷದವರನ್ನಷ್ಟೇ ಅಲ್ಲದೆ, ಆಯಾ ಕ್ಷೇತ್ರದ ಪ್ರತಿಪಕ್ಷಗಳ ಜನಪ್ರತಿನಿಧಿಗಳನ್ನು ಒಳಗೊಂಡು ಕರಕೊಂಡು ಹೋಗುವಂತೆ ಸಿಎಂ ಆದೇಶಿಸಿದ್ದಾರೆ.
