ಗೃಹಜ್ಯೋತಿ ಮರುಪರಿಶೀಲನೆ ಪ್ರಕ್ರಿಯೆಯಲ್ಲಿ ಮಂದಗತಿ: ಮೊಬೈಲ್ ಆ್ಯಪ್ ದೋಷದಿಂದ ಬೆಸ್ಕಾಂ ಕಚೇರಿಗಳ ಮುಂದೆ ಫಜೀತಿ!
Gruhajyothi Verification Issue
ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಯ ಮರುಪರಿಶೀಲನಾ ಕಾರ್ಯವು ಮಂದಗತಿಯಲ್ಲಿ ಸಾಗುತ್ತಿರುವುದು ಫಲಾನುಭವಿಗಳನ್ನು ಕಂಗಾಲಾಗಿಸಿದೆ. ಉಚಿತ ವಿದ್ಯುತ್ ಪಡೆಯುವ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ಗೊಂದಲ ಮತ್ತು ತಾಂತ್ರಿಕ ತೊಂದರೆಗಳಿಂದಾಗಿ ಬೆಸ್ಕಾಂ (BESCOM) ಕಚೇರಿಗಳ ಮುಂದೆ ಸಾರ್ವಜನಿಕರು ಸಾಗಲಿನಲ್ಲಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮರುಪರಿಶೀಲನೆಯಲ್ಲಿ ಎದುರಾಗಿರುವ ಪ್ರಮುಖ ಸಮಸ್ಯೆಗಳು:
- ಮೊಬೈಲ್ ಆ್ಯಪ್ ಹಾಗೂ ಸರ್ವರ್ ದೋಷ: ಮರುಪರಿಶೀಲನೆಗಾಗಿ ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ನಲ್ಲಿ ಹಲವು ತಾಂತ್ರಿಕ ದೋಷ ಹಾಗೂ ಸರ್ವರ್ ಸಮಸ್ಯೆ ಕಾಡುತ್ತಿರುವುದರಿಂದ ಪ್ರಕ್ರಿಯೆ ನಿಧಾನವಾಗಿದೆ.
- ಸಿಬ್ಬಂದಿ ಕೊರತೆ ಮತ್ತು ಮನೆಗಳಿಗೆ ಭೇಟಿ ನೀಡದಿರುವ ಆರೋಪ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದರಿಂದ ಸಾರ್ವಜನಿಕರು ಖುದ್ದಾಗಿ ಬೆಸ್ಕಾಂ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
- ಮಾಲೀಕರು – ಬಾಡಿಗೆದಾರರ ಗೊಂದಲ: ಮನೆ ಬದಲಾಯಿಸಿರುವವರು, ಹೊಸದಾಗಿ ಬಾಡಿಗೆಗೆ ಬಂದವರು ಹಾಗೂ ಮನೆ ಖಾಲಿ ಮಾಡಿರುವವರ ವಿವರಗಳ ನವೀಕರಣದಲ್ಲಿ ಗೊಂದಲ ಮುಂದುವರಿದಿದೆ.
- ದಾಖಲೆಗಳ ಪರಿಶೀಲನೆ: ಆಧಾರ್ ಕಾರ್ಡ್, ಹಳೆಯ ಬಳಕೆ ದತ್ತಾಂಶ ಹಾಗೂ ವಿಳಾಸ ಬದಲಾವಣೆ ವಿಚಾರದಲ್ಲಿ ಜನಸಾಮಾನ್ಯರಿಗೆ ಸ್ಪಷ್ಟತೆ ಸಿಗದೆ ಪರದಾಡುತ್ತಿದ್ದಾರೆ.
ಬೆಸ್ಕಾಂ ಸ್ಪಷ್ಟನೆ ಮತ್ತು ಪ್ರಮುಖ ಸೂಚನೆ:
- ಅಂತ್ಯದ ದಿನಾಂಕ ವಿಸ್ತರಣೆ: ಜುಲೈ ಅಂತ್ಯಕ್ಕೆ ನಿಗದಿಯಾಗಿದ್ದ ಮರುಪರಿಶೀಲನೆಯನ್ನು ಆಗಸ್ಟ್ ಕೊನೆಯವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ತಿಳಿಸಿದ್ದಾರೆ. ಜುಲೈ ತಿಂಗಳಲ್ಲಿ ಆರಂಭಿಕ ಹಿನ್ನಡೆಯಾಗಿದ್ದರೂ, ಪ್ರಸ್ತುತ ಮೀಟರ್ ರೀಡಿಂಗ್ ಜತೆಗೆ ಪರಿಶೀಲನೆ ಚುರುಕುಗೊಳಿಸಲಾಗಿದೆ.
- ವಿದ್ಯುತ್ ಬಿಲ್ ಪರಿಶೀಲಿಸಿಕೊಳ್ಳಿ: ಪ್ರಸ್ತುತ ತಿಂಗಳ ವಿದ್ಯುತ್ ಬಿಲ್ನಲ್ಲಿ ಗೃಹಜ್ಯೋತಿ ಸಮೀಕ್ಷೆ ಕುರಿತ ಆ್ಯಪ್ ಡೇಟ್ ನಮೂದಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಸಹಾಯವಾಣಿ ಸಂಖ್ಯೆ: ಹೆಚ್ಚಿನ ಮಾಹಿತಿಗಾಗಿ ಅಥವಾ ದೂರುಗಳಿಗಾಗಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಅಥವಾ ವಿಶೇಷ ಸಹಾಯವಾಣಿಯನ್ನು ಸಂಪರ್ಕಿಸಬಹುದು.
