Ration Card Update ರೇಷನ್ ಕಾರ್ಡ್ ಇದ್ದವರಿಗೆ ಜುಲೈ 1 ರಿಂದ ಹೊಸ ನಿಯಮ! ಅಕ್ಕಿ ಹಣ ಯಾರಿಗೆ ಸಿಗಲ್ಲ? ಸರ್ಕಾರದ ಲೇಟೆಸ್ಟ್ ಆದೇಶ ಇಲ್ಲಿದೆ ನೋಡಿ!
Ration Card Update ರೇಷನ್ ಕಾರ್ಡ್ ಇದ್ದವರಿಗೆ ಜುಲೈ 1 ರಿಂದ ಹೊಸ ನಿಯಮ! ಅಕ್ಕಿ ಹಣ ಯಾರಿಗೆ ಸಿಗಲ್ಲ? ಸರ್ಕಾರದ ಲೇಟೆಸ್ಟ್ ಆದೇಶ ಇಲ್ಲಿದೆ ನೋಡಿ!
ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಆಹಾರ ಇಲಾಖೆಯು ಜುಲೈ 1 ರಿಂದ ಅನ್ವಯವಾಗುವಂತೆ ಹೊಸ ಸೂಚನೆಯೊಂದನ್ನು ನೀಡಿದೆ. ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಸಿಗುವ ಉಚಿತ ಅಕ್ಕಿ ಮತ್ತು ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ನೀಡಲಾಗುವ ನಗದು ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಯಾರಿಗೆ ಸಿಗಲ್ಲ ಜುಲೈ ತಿಂಗಳ ಅಕ್ಕಿ ಹಣ?
ಸರ್ಕಾರದ ಹೊಸ ಆದೇಶದ ಪ್ರಕಾರ, ಕಳೆದ 3 ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಸತತವಾಗಿ ಪಡಿತರ (ರೇಷನ್) ಪಡೆಯದ ರೇಷನ್ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ. ಇಂತಹ ಕಾರ್ಡ್ದಾರರಿಗೆ ಜುಲೈ ತಿಂಗಳಿನಿಂದ ಯಾವುದೇ ಉಚಿತ ಅಕ್ಕಿ ಸಿಗುವುದಿಲ್ಲ ಮತ್ತು ಅವರ ಖಾತೆಗೆ ಜಮೆಯಾಗುತ್ತಿದ್ದ ಅನ್ನಭಾಗ್ಯದ ಹಣವೂ ಸಹ ಸ್ಥಗಿತಗೊಳ್ಳಲಿದೆ.
ನಿಮ್ಮ ಹಣ ಸೇಫ್ ಆಗಿರಲು ಹೀಗೆ ಮಾಡಿ:
ಒಂದು ವೇಳೆ ನೀವು ಕಳೆದ ಕೆಲವು ತಿಂಗಳುಗಳಿಂದ ರೇಷನ್ ತಗೊಳ್ಳದಿದ್ದರೆ, ತಕ್ಷಣವೇ ಈ ತಿಂಗಳ ಅಂತ್ಯದೊಳಗೆ ನಿಮ್ಮ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡಿ ಪಡಿತರ ಪಡೆದುಕೊಳ್ಳಿ. ಹಾಗೆಯೇ ನಿಮ್ಮ ರೇಷನ್ ಕಾರ್ಡ್ಗೆ ಆಧಾರ್ ಲಿಂಕ್ ಮತ್ತು ಬ್ಯಾಂಕ್ ಖಾತೆಗೆ ಇ-ಕೆವೈಸಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಸರ್ಕಾರ ತಿಳಿಸಿದೆ.
