ಕೊರೊನಾ ಸಂಕಷ್ಟ ಕಾಲದಲ್ಲಿ ತೊಂದರೆ ಅನಿಭವಿಸುತ್ತಿರುವ ಕ್ಷೇತ್ರದಲ್ಲಿ ಚಿತ್ರರಂಗವೂ ಒಂದು.ಲಾಕ್ ಡೌನ್ ದೆಸೆಯಿಂದ ಯಾವುದೇ ಸಿನೆಮಾ, ಧಾರಾವಾಹಿಗಳು, ರಿಯಾಲಿಟಿ ಶೋ ಗಳು ಚಿತ್ರಿಕರಣ ನಡೆಸುವಂತಿಲ್ಲ ಹೀಗಾಗಿ ಚಿತ್ರರಂಗವನ್ನೇ ಅವಲಂಬಿಸಿದ್ದವರ ಬದುಕುಗಳು ಶೋಚನೀಯವಾಗಿವೆ. ಈ ದುರಿತ ಸಮಯದಲ್ಲಿ ನಟ ಉಪೇಂದ್ರ ರವರು ಕಾರ್ಮಿಕರು, ಕಲಾವಿದ, ತಂತ್ರಜ್ಞರಿಗೆ ಸಹಾಯ ಹಸ್ತ ಚಾಚಿದ್ದಾರೆ. ಒಕ್ಕೂಟದ ಎಲ್ಲಾ ಸಂಘಗಳಿಂದ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿರುವುದಾಗಿ ಜಾಲತಾಣಗಳ ಮೂಲಕ ತಿಳಿಸಿದ್ದರು. ಈಗ ಇವರ ಕಾರ್ಯಕ್ಕೆ ಚಿತ್ರರಂಗದ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ
ಅಭಿನಯ ಸರಸ್ವತಿ, ಪದ್ಮಭೂಷಣ ಬಿ. ಸರೋಜಾದೇವಿ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ. ಈ ಹಣವನ್ನು ಸಾಧು ಕೋಕಿಲರವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.